ಸ್ಯಾಂಕಿ ಕೆರೆಯು ನಗರದ ಜಲಮೂಲವಾಗಿದ್ದು, ಅದನ್ನು ಸಂರಕ್ಷಿಸಬೇಕಾಗಿದೆ. ಮನುಷ್ಯನ ಹಸ್ತಕ್ಷೇಪದಿಂದ ಇದನ್ನು ದೂರವಿಡಬೇಕು. ಕೆರೆಗಳನ್ನು ನಾವು ಸಂರಕ್ಷಿಸಬೇಕು ಮತ್ತು ಅವುಗಳನ್ನು ಮನರಂಜನಾ ಅಂಶದಿಂದ ನೋಡಬಾರದು. ಆದರೆ, ಇದನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮುಂದಾಗಿದೆ ಎಂಬುದು ಬೇಸರ ತಂದಿದೆ. ಇದರಿಂದ ಕೆರೆ ಸಂಪೂರ್ಣ ಹಾಳಾಗಲಿದ್ದು, ಕೂಡಲೇ ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.