ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್, ’ಕೆ.ಆರ್.ಪುರ ಸರ್ವೆ ನಂ. 58 ರಲ್ಲಿ ಗಂಗಶೆಟ್ಟಿ ಕೆರೆ ಇದ್ದು ಅದು ಬಿಬಿಎಂಪಿ ಕಚೇರಿಯ ಹಿಂಭಾಗ ಹಾಗೂ ತಹಶಿಲ್ದಾರ್ ಕಚೇರಿ ಮುಂಭಾಗ ಇದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ‘ ಎಂದರು.