<p><strong>ಕೆ.ಆರ್.ಪುರ:</strong> ಕೆ.ಆರ್.ಪುರದ ಗಂಗಶೆಟ್ಟಿ ಕೆರೆ ಒತ್ತುವರಿಯಾಗಿದೆ ಎಂದು ಆರೋಪಿಸಿ ಕೃಷ್ಣರಾಜಪುರ ಕೆರೆ ಸಂರಕ್ಷಣಾ ಸಮಿತಿ, ಅಖಿಲ ಕರ್ನಾಟಕ ಮತ್ತು ವ್ಯಾಪಾರಿಗಳ ಒಕ್ಕೂಟ ಹಾಗೂ ಸಿಪಿಎಮ್ ಸಂಘಟನೆಗಳ ವತಿಯಿಂದ ಖಾಕಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು.</p>.<p>ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್, ’ಕೆ.ಆರ್.ಪುರ ಸರ್ವೆ ನಂ. 58 ರಲ್ಲಿ ಗಂಗಶೆಟ್ಟಿ ಕೆರೆ ಇದ್ದು ಅದು ಬಿಬಿಎಂಪಿ ಕಚೇರಿಯ ಹಿಂಭಾಗ ಹಾಗೂ ತಹಶಿಲ್ದಾರ್ ಕಚೇರಿ ಮುಂಭಾಗ ಇದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ‘ ಎಂದರು.</p>.<p>ಕೆ.ಆರ್.ಪುರ ಸಂತೆ ಮೈದಾನದಿಂದ ಹೊರಟ ಪ್ರತಿಭಟನೆ ಮೆರವಣಿಗೆ ದೇವಸಂದ್ರ ಸುತ್ತಮುತ್ತಲ ಬಡಾವಣೆಗಳು, ಮುಖ್ಯ ರಸ್ತೆಗಳ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿತು.</p>.<p>’ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಿಗದ ಕಾರಣ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ಕಚೇರಿಯನ್ನು ನೂರು ಸುತ್ತು ಸುತ್ತಿ ನೂರೊಂದು ತೆಂಗಿನ ಕಾಯಿ ಒಡೆದು ಮನವಿ ಮತ್ರ ನೀಡಲಾಗುವುದು‘ ಎಂದು ಎಲೆ ಶ್ರೀನಿವಾಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ಕೆ.ಆರ್.ಪುರದ ಗಂಗಶೆಟ್ಟಿ ಕೆರೆ ಒತ್ತುವರಿಯಾಗಿದೆ ಎಂದು ಆರೋಪಿಸಿ ಕೃಷ್ಣರಾಜಪುರ ಕೆರೆ ಸಂರಕ್ಷಣಾ ಸಮಿತಿ, ಅಖಿಲ ಕರ್ನಾಟಕ ಮತ್ತು ವ್ಯಾಪಾರಿಗಳ ಒಕ್ಕೂಟ ಹಾಗೂ ಸಿಪಿಎಮ್ ಸಂಘಟನೆಗಳ ವತಿಯಿಂದ ಖಾಕಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು.</p>.<p>ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್, ’ಕೆ.ಆರ್.ಪುರ ಸರ್ವೆ ನಂ. 58 ರಲ್ಲಿ ಗಂಗಶೆಟ್ಟಿ ಕೆರೆ ಇದ್ದು ಅದು ಬಿಬಿಎಂಪಿ ಕಚೇರಿಯ ಹಿಂಭಾಗ ಹಾಗೂ ತಹಶಿಲ್ದಾರ್ ಕಚೇರಿ ಮುಂಭಾಗ ಇದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ‘ ಎಂದರು.</p>.<p>ಕೆ.ಆರ್.ಪುರ ಸಂತೆ ಮೈದಾನದಿಂದ ಹೊರಟ ಪ್ರತಿಭಟನೆ ಮೆರವಣಿಗೆ ದೇವಸಂದ್ರ ಸುತ್ತಮುತ್ತಲ ಬಡಾವಣೆಗಳು, ಮುಖ್ಯ ರಸ್ತೆಗಳ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿತು.</p>.<p>’ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಸಿಗದ ಕಾರಣ ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ಕಚೇರಿಯನ್ನು ನೂರು ಸುತ್ತು ಸುತ್ತಿ ನೂರೊಂದು ತೆಂಗಿನ ಕಾಯಿ ಒಡೆದು ಮನವಿ ಮತ್ರ ನೀಡಲಾಗುವುದು‘ ಎಂದು ಎಲೆ ಶ್ರೀನಿವಾಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>