‘ಬೆಂಗಳೂರಿನಲ್ಲಿರುವ ಪರಿಚಯಸ್ಥ ಶ್ರೀನಿವಾಸ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದಾನೆ. ಪಿಎಸ್ಐ ಹುದ್ದೆ ಕೊಡಿಸುವುದಾಗಿ ಹೇಳಿರುವ ಆತ, ಯಾರಾದರೂ ಅಭ್ಯರ್ಥಿಗಳು ಇದ್ದರೆ ತಿಳಿಸುವಂತೆ ಕೋರಿದ್ದಾನೆ. ಆತನನ್ನು ಸಂಪರ್ಕಿಸಿದರೆ, ಮಗಳಿಗೆ ಪಿಎಸ್ಐ ಕೆಲಸ ಸಿಗುವುದು ಖಚಿತ’ ಎಂಬುದಾಗಿ ಕೃಷ್ಣಪ್ಪ ಹೇಳಿದ್ದರು. ಜೊತೆಗೆ, ಪುಟ್ಟರಾಜು ಅವರಿಗೆ ಶ್ರೀನಿವಾಸ್ನ ಪರಿಚಯ ಮಾಡಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.