ಕೊರೊನಾ ಸೋಂಕಿನ ಆರಂಭದಲ್ಲಿ ಸರ್ಕಾರದ ಪರವಾಗಿ ಮಾಧ್ಯಮದವರೊಂದಿಗೆ ಯಾರು ಮಾತನಾಡಬೇಕು ಎಂಬ ಜಿಜ್ಞಾಸೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಧ್ಯೆ ನಡೆದಿತ್ತು. ಇಬ್ಬರೂ ಮಾತನಾಡಿ ಅಂಕಿ–ಅಂಶಗಳ ವ್ಯತ್ಯಾಸದಿಂದ ಹಲವು ಬಾರಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು. ಬಳಿಕ ಈ ಜವಾಬ್ದಾರಿಯನ್ನು ಎಸ್.ಸುರೇಶ್ಕುಮಾರ್ ಅವರಿಗೆ ವಹಿಸಲಾಗಿತ್ತು.