<p><strong>ಬೆಂಗಳೂ</strong>ರು: ಬೆಂಗಳೂರು ನಗರದ ಕೋವಿಡ್ ಉಸ್ತುವಾರಿಗಾಗಿಇಬ್ಬರು ಸಚಿವರ ‘ಮುಸುಕಿನ ಗುದ್ದಾಟ’ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.</p>.<p>ಕೊರೊನಾ ಸೋಂಕಿನ ಆರಂಭದಲ್ಲಿ ಸರ್ಕಾರದ ಪರವಾಗಿ ಮಾಧ್ಯಮದವರೊಂದಿಗೆ ಯಾರು ಮಾತನಾಡಬೇಕು ಎಂಬ ಜಿಜ್ಞಾಸೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಧ್ಯೆ ನಡೆದಿತ್ತು. ಇಬ್ಬರೂ ಮಾತನಾಡಿ ಅಂಕಿ–ಅಂಶಗಳ ವ್ಯತ್ಯಾಸದಿಂದ ಹಲವು ಬಾರಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು. ಬಳಿಕ ಈ ಜವಾಬ್ದಾರಿಯನ್ನು ಎಸ್.ಸುರೇಶ್ಕುಮಾರ್ ಅವರಿಗೆ ವಹಿಸಲಾಗಿತ್ತು.</p>.<p>ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ. ಈಗ ಕಂದಾಯ ಸಚಿವ ಆರ್.ಅಶೋಕ ಮತ್ತು ಡಾ.ಸುಧಾಕರ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಗಹನ ಚರ್ಚೆಗೆ ಕಾರವಾಗಿದೆ.</p>.<p>ಡಾ.ಸುಧಾಕರ್ ಅವರು ಕ್ವಾರಂಟೈನ್ಗೆ ಒಳಗಾದ ಸಂದರ್ಭದಲ್ಲಿ ಅದರ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಶೋಕ ಅವರಿಗೆ ವಹಿಸಿದ್ದರು. ತಮಗೆ ವಹಿಸಿದ ಕಾರ್ಯವನ್ನು ಅಶೋಕ ಅತಿ ಉತ್ಸಾಹದಿಂದಲೇ ನಿರ್ವಹಿಸಿ<br />ದ್ದರು. ಆ ಜವಾಬ್ದಾರಿ ಕಾಯಂ ಎಂದು ಭಾವಿಸಿದ್ದರು ಎಂದು ಹೇಳಲಾಗಿದೆ.</p>.<p>ಇದೀಗ ಡಾ.ಸುಧಾಕರ್ ಕ್ವಾರಂಟೈನ್ ಮುಗಿಸಿ ಬಂದಿದ್ದು, ಮಂಗಳವಾರ ನಡೆದ ಖಾಸಗಿ ವೈದ್ಯಕೀಯ ಕಾಲೇಜುಗಳ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಮುಗಿಯುತ್ತಿದ್ದಂತೆ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಸಭೆಯ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂ</strong>ರು: ಬೆಂಗಳೂರು ನಗರದ ಕೋವಿಡ್ ಉಸ್ತುವಾರಿಗಾಗಿಇಬ್ಬರು ಸಚಿವರ ‘ಮುಸುಕಿನ ಗುದ್ದಾಟ’ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.</p>.<p>ಕೊರೊನಾ ಸೋಂಕಿನ ಆರಂಭದಲ್ಲಿ ಸರ್ಕಾರದ ಪರವಾಗಿ ಮಾಧ್ಯಮದವರೊಂದಿಗೆ ಯಾರು ಮಾತನಾಡಬೇಕು ಎಂಬ ಜಿಜ್ಞಾಸೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಧ್ಯೆ ನಡೆದಿತ್ತು. ಇಬ್ಬರೂ ಮಾತನಾಡಿ ಅಂಕಿ–ಅಂಶಗಳ ವ್ಯತ್ಯಾಸದಿಂದ ಹಲವು ಬಾರಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು. ಬಳಿಕ ಈ ಜವಾಬ್ದಾರಿಯನ್ನು ಎಸ್.ಸುರೇಶ್ಕುಮಾರ್ ಅವರಿಗೆ ವಹಿಸಲಾಗಿತ್ತು.</p>.<p>ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದೆ. ಈಗ ಕಂದಾಯ ಸಚಿವ ಆರ್.ಅಶೋಕ ಮತ್ತು ಡಾ.ಸುಧಾಕರ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಗಹನ ಚರ್ಚೆಗೆ ಕಾರವಾಗಿದೆ.</p>.<p>ಡಾ.ಸುಧಾಕರ್ ಅವರು ಕ್ವಾರಂಟೈನ್ಗೆ ಒಳಗಾದ ಸಂದರ್ಭದಲ್ಲಿ ಅದರ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಶೋಕ ಅವರಿಗೆ ವಹಿಸಿದ್ದರು. ತಮಗೆ ವಹಿಸಿದ ಕಾರ್ಯವನ್ನು ಅಶೋಕ ಅತಿ ಉತ್ಸಾಹದಿಂದಲೇ ನಿರ್ವಹಿಸಿ<br />ದ್ದರು. ಆ ಜವಾಬ್ದಾರಿ ಕಾಯಂ ಎಂದು ಭಾವಿಸಿದ್ದರು ಎಂದು ಹೇಳಲಾಗಿದೆ.</p>.<p>ಇದೀಗ ಡಾ.ಸುಧಾಕರ್ ಕ್ವಾರಂಟೈನ್ ಮುಗಿಸಿ ಬಂದಿದ್ದು, ಮಂಗಳವಾರ ನಡೆದ ಖಾಸಗಿ ವೈದ್ಯಕೀಯ ಕಾಲೇಜುಗಳ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಮುಗಿಯುತ್ತಿದ್ದಂತೆ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಸಭೆಯ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>