<p><strong>ದಾಬಸ್ಪೇಟೆ: </strong>ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಸೋಂಪುರ ಹಾಗೂ ಸುತ್ತಮುತ್ತ ಸುರಿದ ಭಾರಿ ಮಳೆಯಿಂದ ಸಾವಿರಾರು ಹೆಕ್ಟೇರ್ ರಾಗಿ ಬೆಳೆ ಹಾಳಾಗುವ ಸಂಭವ ಹೆಚ್ಚಾಗಿದೆ. ಇದರಿಂದ ರಾಗಿ ಇಳುವರಿ ಕುಸಿಯುವ, ರೈತರಿಗೆ ಹುಲ್ಲು ಕೊಳೆಯುವ ಆತಂಕ ಮೂಡಿಸಿದೆ.</p>.<p>ಸೋಂಪುರ ಹೋಬಳಿಯಲ್ಲಿ ಈ ಬಾರಿ ನಾಲ್ಕು ಸಾವಿರಕ್ಕೂ ಹೆಚ್ಚು ಹೆಕ್ಟೇರ್ಗಳಲ್ಲಿ ರಾಗಿ ಬಿತ್ತನೆಯಾಗಿದೆ. ಸಕಾಲಕ್ಕೆ ಬಂದ ಮಳೆಯಿಂದ ಉತ್ತಮವಾಗಿಯೇ ಬೆಳೆ ಬಂದಿತ್ತು. ಕೊಯ್ಲಿಗೆ ಬಂದಿರುವ ಈ ಹಂತದಲ್ಲಿ ಮಳೆ ಸುರಿದಿರುವುದರಿಂದ ರೈತ ವರ್ಗಕ್ಕೆ ತೊಂದರೆಯಾಗಿದೆ.</p>.<p>ಈಗಾಗಲೇ ನೂರಾರು ಹೆಕ್ಟೇರ್ಗಳಲ್ಲಿ ರಾಗಿ ಕೊಯ್ಲು ಆಗಿದ್ದು, ಮಳೆಯಿಂದ ನೆನೆದು ಹೋಗಿದೆ. ಹುಲ್ಲು ಕೊಳೆಯುವ ಹಾಗೂ ರಾಗಿ ಕಪ್ಪಾಗುವ ಆತಂಕ ರೈತರದು.</p>.<p>ಕೃಷಿ ಕಾರ್ಮಿಕರ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ರಾಗಿ ಪೈರು ಕೊಯ್ಲಿಗೆ ಯಂತ್ರ ಬಳಸಲಾಗುತ್ತಿದೆ. ಮಳೆ ಬಂದು ರಾಗಿ ಪೈರಿನ ದಿಂಡು ನೆನೆದು ಹೋಗಿರುವುದರಿಂದ ಅದನ್ನು ತಿರುವಿ ಹಾಕಲು ಮತ್ತೆ ಕಾರ್ಮಿಕರು ಹೆಚ್ಚು ಬೇಕು. ಇದು ರೈತರಿಗೆ ಹೊರೆಯಾಗಲಿದೆ.</p>.<p>ಕೊಯ್ಲಿಗೆ ಯಂತ್ರಗಳು ಇದ್ದರೂ ಅದನ್ನು ಬಣವೆಗೆ ಹಾಕಲು ಹಾಗೂ ಇನ್ನಿತರ ಕೆಲಸಗಳಿಗೆ ಕಾರ್ಮಿಕರು ಬೇಕು. ಈಗಾಗಲೇ ಕೂಲಿ ಕೂಡ ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ನಿಡವಂದದ ಸೂರ್ಯಕುಮಾರ್.</p>.<p>ಈ ವರ್ಷ ಉತ್ತಮ ಮಳೆ ಬಂದು, ಬೆಳೆಯು ಚೆನ್ನಾಗಿಯೇ ಬಂದಿತ್ತು. ಆದರೆ ಕೊಯಿಲು ಮಾಡಿ ಕೂಡಿಟ್ಟುಕೊಳ್ಳುವವರೆಗೆ ಮಳೆ ಬೇಡವಾಗಿತ್ತು. ಜೋರಾಗಿ ಸುರಿದ ಮಳೆಯಿಂದ ರಾಗಿ, ಮೇವು ಎರಡೂ ಸಹ ಮನೆ ಸೇರುವ ನಂಬಿಕೆ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡರು ಮಾಕೇನಹಳ್ಳಿ ರೈತ ಗೋಪಾಲ್.</p>.<p class="Subhead">ಉತ್ತಮ ಮಳೆ: ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆ ಮಳೆಗಿಂಗ 99 ಮಿ.ಮೀ. ಅಧಿಕ ಮಳೆಯಾಗಿದೆ. ಬೆಳವಣಿಗೆಯ ವಿವಿಧ ಹಂತಗಳಾದ ಬಿತ್ತನೆ, ಬೆಳವಣಿಗೆ, ಕಾಳು ಕಟ್ಟುವುದು ಈ ಮೂರು ಹಂತಗಳಲ್ಲಿಯೂ ಮಳೆಯು ಸಮಸ್ಯೆ ಇಲ್ಲದೇ ಉತ್ತಮವಾಗಿ ಬಿದ್ದದ್ದರಿಂದ ರೈತರು ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದರು. ತಾಲ್ಲೂಕಿನಾದ್ಯಂತ 12,003 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. 11,249 ಹೆಕ್ಟೇರ್ಗಳಲ್ಲಿ ಬಿತ್ತನೆ ಆಗಿತ್ತು. ಈ ಪೈಕಿ ನೆಲಮಂಗಲ ಕಸಬಾದಲ್ಲಿ 3900 ಹೆಕ್ಟೇರ್, ಸೋಂಪುರದಲ್ಲಿ 4010 ಹೆಕ್ಟೇರ್ ಹಾಗೂ ತ್ಯಾಮಗೊಂಡ್ಲುವಿನಲ್ಲಿ 3822 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಬಸ್ಪೇಟೆ: </strong>ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಸೋಂಪುರ ಹಾಗೂ ಸುತ್ತಮುತ್ತ ಸುರಿದ ಭಾರಿ ಮಳೆಯಿಂದ ಸಾವಿರಾರು ಹೆಕ್ಟೇರ್ ರಾಗಿ ಬೆಳೆ ಹಾಳಾಗುವ ಸಂಭವ ಹೆಚ್ಚಾಗಿದೆ. ಇದರಿಂದ ರಾಗಿ ಇಳುವರಿ ಕುಸಿಯುವ, ರೈತರಿಗೆ ಹುಲ್ಲು ಕೊಳೆಯುವ ಆತಂಕ ಮೂಡಿಸಿದೆ.</p>.<p>ಸೋಂಪುರ ಹೋಬಳಿಯಲ್ಲಿ ಈ ಬಾರಿ ನಾಲ್ಕು ಸಾವಿರಕ್ಕೂ ಹೆಚ್ಚು ಹೆಕ್ಟೇರ್ಗಳಲ್ಲಿ ರಾಗಿ ಬಿತ್ತನೆಯಾಗಿದೆ. ಸಕಾಲಕ್ಕೆ ಬಂದ ಮಳೆಯಿಂದ ಉತ್ತಮವಾಗಿಯೇ ಬೆಳೆ ಬಂದಿತ್ತು. ಕೊಯ್ಲಿಗೆ ಬಂದಿರುವ ಈ ಹಂತದಲ್ಲಿ ಮಳೆ ಸುರಿದಿರುವುದರಿಂದ ರೈತ ವರ್ಗಕ್ಕೆ ತೊಂದರೆಯಾಗಿದೆ.</p>.<p>ಈಗಾಗಲೇ ನೂರಾರು ಹೆಕ್ಟೇರ್ಗಳಲ್ಲಿ ರಾಗಿ ಕೊಯ್ಲು ಆಗಿದ್ದು, ಮಳೆಯಿಂದ ನೆನೆದು ಹೋಗಿದೆ. ಹುಲ್ಲು ಕೊಳೆಯುವ ಹಾಗೂ ರಾಗಿ ಕಪ್ಪಾಗುವ ಆತಂಕ ರೈತರದು.</p>.<p>ಕೃಷಿ ಕಾರ್ಮಿಕರ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ರಾಗಿ ಪೈರು ಕೊಯ್ಲಿಗೆ ಯಂತ್ರ ಬಳಸಲಾಗುತ್ತಿದೆ. ಮಳೆ ಬಂದು ರಾಗಿ ಪೈರಿನ ದಿಂಡು ನೆನೆದು ಹೋಗಿರುವುದರಿಂದ ಅದನ್ನು ತಿರುವಿ ಹಾಕಲು ಮತ್ತೆ ಕಾರ್ಮಿಕರು ಹೆಚ್ಚು ಬೇಕು. ಇದು ರೈತರಿಗೆ ಹೊರೆಯಾಗಲಿದೆ.</p>.<p>ಕೊಯ್ಲಿಗೆ ಯಂತ್ರಗಳು ಇದ್ದರೂ ಅದನ್ನು ಬಣವೆಗೆ ಹಾಕಲು ಹಾಗೂ ಇನ್ನಿತರ ಕೆಲಸಗಳಿಗೆ ಕಾರ್ಮಿಕರು ಬೇಕು. ಈಗಾಗಲೇ ಕೂಲಿ ಕೂಡ ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ನಿಡವಂದದ ಸೂರ್ಯಕುಮಾರ್.</p>.<p>ಈ ವರ್ಷ ಉತ್ತಮ ಮಳೆ ಬಂದು, ಬೆಳೆಯು ಚೆನ್ನಾಗಿಯೇ ಬಂದಿತ್ತು. ಆದರೆ ಕೊಯಿಲು ಮಾಡಿ ಕೂಡಿಟ್ಟುಕೊಳ್ಳುವವರೆಗೆ ಮಳೆ ಬೇಡವಾಗಿತ್ತು. ಜೋರಾಗಿ ಸುರಿದ ಮಳೆಯಿಂದ ರಾಗಿ, ಮೇವು ಎರಡೂ ಸಹ ಮನೆ ಸೇರುವ ನಂಬಿಕೆ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡರು ಮಾಕೇನಹಳ್ಳಿ ರೈತ ಗೋಪಾಲ್.</p>.<p class="Subhead">ಉತ್ತಮ ಮಳೆ: ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆ ಮಳೆಗಿಂಗ 99 ಮಿ.ಮೀ. ಅಧಿಕ ಮಳೆಯಾಗಿದೆ. ಬೆಳವಣಿಗೆಯ ವಿವಿಧ ಹಂತಗಳಾದ ಬಿತ್ತನೆ, ಬೆಳವಣಿಗೆ, ಕಾಳು ಕಟ್ಟುವುದು ಈ ಮೂರು ಹಂತಗಳಲ್ಲಿಯೂ ಮಳೆಯು ಸಮಸ್ಯೆ ಇಲ್ಲದೇ ಉತ್ತಮವಾಗಿ ಬಿದ್ದದ್ದರಿಂದ ರೈತರು ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದರು. ತಾಲ್ಲೂಕಿನಾದ್ಯಂತ 12,003 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. 11,249 ಹೆಕ್ಟೇರ್ಗಳಲ್ಲಿ ಬಿತ್ತನೆ ಆಗಿತ್ತು. ಈ ಪೈಕಿ ನೆಲಮಂಗಲ ಕಸಬಾದಲ್ಲಿ 3900 ಹೆಕ್ಟೇರ್, ಸೋಂಪುರದಲ್ಲಿ 4010 ಹೆಕ್ಟೇರ್ ಹಾಗೂ ತ್ಯಾಮಗೊಂಡ್ಲುವಿನಲ್ಲಿ 3822 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>