<p><strong>ಬೆಂಗಳೂರು:</strong> ನಗರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಬೆಳಗಿನ ಜಾವದಿಂದ ತಡರಾತ್ರಿಯವರೆಗೂ ತುಂತುರು ಮಳೆ ಸುರಿಯಿತು. ಮಳೆಯ ಸಿಂಚನದಲ್ಲಿ ನಗರವಾಸಿಗಳು ಮಿಂದರು.</p>.<p>ಮುಂಜಾವಿನಿಂದಲೇ ಮೋಡಕವಿದ ವಾತಾವರಣ ಇತ್ತು. ಬೀಳುತ್ತಿದ್ದ ಜಿಟಿ–ಜಿಟಿ ಮಳೆ ಹನಿಗಳಿಗೆ ಮೈಯೊಡ್ಡುತ್ತ ಕೆಲಸದ ಸ್ಥಳಗಳಿಗೆ ಜನರು ತೆರಳುತ್ತಿದ್ದ ದೃಶ್ಯ ಬೆಳಿಗ್ಗೆ ಸಾಮಾನ್ಯವಾಗಿತ್ತು. ಯಲಹಂಕದ ಬಾಗಲೂರು, ಬೊಮ್ಮನಹಳ್ಳಿ, ಜ್ಞಾನಭಾರತಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಬಸವನಗುಡಿಯಲ್ಲಿ ಸಂಜೆ ಕೆಲಹೊತ್ತು ಜೋರು ಮಳೆ ಸುರಿಯಿತು.</p>.<p>ಬಾಗಲೂರು ಮುಖ್ಯರಸ್ತೆಯ ಎಸ್ಎಲ್ವಿ ಲೇಕ್ ವೀವ್ ಅಪಾರ್ಟ್ಮೆಂಟ್ನ ನೆಲಮಹಡಿಗೆ ನೀರು ನುಗ್ಗಿತ್ತು. ಎಚ್ಆರ್ಬಿಆರ್ ಬಡಾವಣೆಯಲ್ಲಿ ವಿದ್ಯುತ್ ತಂತಿ ಕಡಿತಗೊಂಡು ಹುಡುಗನೊಬ್ಬನಿಗೆ ಗಾಯವಾಗಿದೆ.</p>.<p>ಸೀಲ್ಕ್ಬೋರ್ಡ್ನ 36ನೇ ಮುಖ್ಯರಸ್ತೆಯ ಇಂಡಿಯನ್ ಆಯಿಲ್ ಪೆಟ್ರೊಲ್ ಬಂಕ್, ಮಹಾಲಕ್ಷ್ಮೀ ಬಡಾವಣೆ, ಜೆ.ಪಿ.ನಗರ 3ನೇ ಹಂತದಲ್ಲಿ ತಲಾ ಒಂದು ಮರ ಗಾಳಿಯ ರಭಸಕ್ಕೆ ಉರುಳಿ ಬಿದ್ದಿದ್ದವು. ರಾತ್ರಿ ಹನ್ನೊಂದರ ಹೊತ್ತಿಗೆ ಅವುಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.</p>.<p class="Subhead">ಮಳೆ ಪ್ರಮಾಣ: ‘ಬೊಮ್ಮನಹಳ್ಳಿ,ದೊರೆಸಾನಿಪಾಳ್ಯದಲ್ಲಿ ತಲಾ 2.7 ಸೆಂ.ಮೀ., ಕೆಂಗೇರಿಯಲ್ಲಿ 2.6, ಕೋಡಿಗೆಹಳ್ಳಿಯಲ್ಲಿ 2.2, ರಾಜರಾಜೇಶ್ವರಿ ನಗರ, ಗೋಪಾಲಪುರದಲ್ಲಿ ತಲಾ 1.8, ದಾಸನಪುರದಲ್ಲಿ 1.3 ಸೆಂ.ಮೀ. ಮಳೆಯಾಗಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಬೆಳಗಿನ ಜಾವದಿಂದ ತಡರಾತ್ರಿಯವರೆಗೂ ತುಂತುರು ಮಳೆ ಸುರಿಯಿತು. ಮಳೆಯ ಸಿಂಚನದಲ್ಲಿ ನಗರವಾಸಿಗಳು ಮಿಂದರು.</p>.<p>ಮುಂಜಾವಿನಿಂದಲೇ ಮೋಡಕವಿದ ವಾತಾವರಣ ಇತ್ತು. ಬೀಳುತ್ತಿದ್ದ ಜಿಟಿ–ಜಿಟಿ ಮಳೆ ಹನಿಗಳಿಗೆ ಮೈಯೊಡ್ಡುತ್ತ ಕೆಲಸದ ಸ್ಥಳಗಳಿಗೆ ಜನರು ತೆರಳುತ್ತಿದ್ದ ದೃಶ್ಯ ಬೆಳಿಗ್ಗೆ ಸಾಮಾನ್ಯವಾಗಿತ್ತು. ಯಲಹಂಕದ ಬಾಗಲೂರು, ಬೊಮ್ಮನಹಳ್ಳಿ, ಜ್ಞಾನಭಾರತಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಬಸವನಗುಡಿಯಲ್ಲಿ ಸಂಜೆ ಕೆಲಹೊತ್ತು ಜೋರು ಮಳೆ ಸುರಿಯಿತು.</p>.<p>ಬಾಗಲೂರು ಮುಖ್ಯರಸ್ತೆಯ ಎಸ್ಎಲ್ವಿ ಲೇಕ್ ವೀವ್ ಅಪಾರ್ಟ್ಮೆಂಟ್ನ ನೆಲಮಹಡಿಗೆ ನೀರು ನುಗ್ಗಿತ್ತು. ಎಚ್ಆರ್ಬಿಆರ್ ಬಡಾವಣೆಯಲ್ಲಿ ವಿದ್ಯುತ್ ತಂತಿ ಕಡಿತಗೊಂಡು ಹುಡುಗನೊಬ್ಬನಿಗೆ ಗಾಯವಾಗಿದೆ.</p>.<p>ಸೀಲ್ಕ್ಬೋರ್ಡ್ನ 36ನೇ ಮುಖ್ಯರಸ್ತೆಯ ಇಂಡಿಯನ್ ಆಯಿಲ್ ಪೆಟ್ರೊಲ್ ಬಂಕ್, ಮಹಾಲಕ್ಷ್ಮೀ ಬಡಾವಣೆ, ಜೆ.ಪಿ.ನಗರ 3ನೇ ಹಂತದಲ್ಲಿ ತಲಾ ಒಂದು ಮರ ಗಾಳಿಯ ರಭಸಕ್ಕೆ ಉರುಳಿ ಬಿದ್ದಿದ್ದವು. ರಾತ್ರಿ ಹನ್ನೊಂದರ ಹೊತ್ತಿಗೆ ಅವುಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.</p>.<p class="Subhead">ಮಳೆ ಪ್ರಮಾಣ: ‘ಬೊಮ್ಮನಹಳ್ಳಿ,ದೊರೆಸಾನಿಪಾಳ್ಯದಲ್ಲಿ ತಲಾ 2.7 ಸೆಂ.ಮೀ., ಕೆಂಗೇರಿಯಲ್ಲಿ 2.6, ಕೋಡಿಗೆಹಳ್ಳಿಯಲ್ಲಿ 2.2, ರಾಜರಾಜೇಶ್ವರಿ ನಗರ, ಗೋಪಾಲಪುರದಲ್ಲಿ ತಲಾ 1.8, ದಾಸನಪುರದಲ್ಲಿ 1.3 ಸೆಂ.ಮೀ. ಮಳೆಯಾಗಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>