‘ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನಗಳಲ್ಲಿನ ಮುಸ್ಲಿಮರು ಧಾರ್ಮಿಕ, ಆರ್ಥಿಕ ಕಾರಣಕ್ಕೆ ಅಲ್ಲಿ ನೆಲೆಸಲು ಸಾಧ್ಯವಿಲ್ಲದೆ ಭಾರತಕ್ಕೆ ನಿರಾಶ್ರಿತರಾಗಿ ಬಂದರೂ ಅವರಿಗೆ ಇಲ್ಲಿ ಪೌರತ್ವ ಸಿಗುವುದೇ ಇಲ್ಲ. ಅವರು 12 ವರ್ಷದ ಬಳಿಕವೂ ಅರ್ಜಿ ಸಲ್ಲಿಸಿ ಪೌರತ್ವ ಹೊಂದುವಂತಿಲ್ಲ. ಇದೇ ಸ್ಥಿತಿ ಪರಿಸ್ಥಿತಿ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ನಿಂದ ಬಂದಂತಹ ನಿರಾಶ್ರಿತರಿಗೂ ಇದೆ. ಟಿಬೆಟ್ ವಿಷಯುದಲ್ಲೂ ನಮಗೆ ಸ್ಪಷ್ಟ ನೀತಿಯೇ ಇಲ್ಲ’ ಎಂದು ಮಾಳವಿಕಾ ಪ್ರಸಾದ್ ಹೇಳಿದರು.