ಜೈಭೀಮ್ ಆರ್ಮಿಯ ರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ್ ಆಜಾದ್, ‘ನಮ್ಮ ದೇಶದಲ್ಲಿ ಯಥಾಸ್ಥಿತಿವಾದ, ಜಾತಿವಾದ, ಕೋಮುವಾದವನ್ನು ವಿರೋಧಿಸುತ್ತಲೇ ಬಂದಿರುವ ಮಹಿಳಾ ಪಡೆಯೇ ಇದೆ.ದೇಶದ ಸಾಕ್ಷರತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾವಿತ್ರಿಬಾಯಿ ಫುಲೆ, ರಮಾಬಾಯಿ ಸೇರಿದಂತೆ ಹಲವು ಆದರ್ಶ ಮಹಿಳೆಯರನ್ನು ದೇಶ ಕಂಡಿದೆ. ಆ ಪರಂಪರೆಯಲ್ಲಿ ಗೌರಿ ಲಂಕೇಶ್ ಅವರೂ ಸೇರಿದ್ದಾರೆ’ ಎಂದು ಅಭಿಪ್ರಾಯಪಟ್ಟರು.