‘ನೇಮಕಾತಿ ಪತ್ರ ನೀಡುವಂತೆ ಕೋರ್ಟ್ ಆದೇಶಿಸಿ, ಅ.15ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಅಭ್ಯರ್ಥಿಗಳಿಗೆ ಈಗಾಗಲೇ ಸ್ಥಳ ನಿಯೋಜನೆಯೂ ಆಗಿದೆ. ಆದರೂ, ಇಲಾಖೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ಮೀನಮೇಷ ಎಣಿಸುತ್ತಿದೆ. ಒಂದು ವೇಳೆ ಈಗ ನೇಮಕಾತಿ ನಡೆದರೆ, ವೇತನ ನೀಡಬೇಕೆಂಬ ಉದ್ದೇಶದಿಂದ ಈ ಧೋರಣೆ ನಡೆಸುತ್ತಿದೆ. ಕಾಲೇಜುಗಳು ಆರಂಭವಾಗುವವರೆಗೆ ನಮ್ಮನ್ನು ಬೇರೆ ಸೇವೆಗಳಿಗೆ ನಿಯೋಜಿಸಿ, ವೇತನ ನೀಡಬಹುದು. ಇದಕ್ಕೂ ನಾವು ಸಿದ್ಧರಿದ್ದೇವೆ’ ಎಂದರು.