<p><strong>ಬೆಂಗಳೂರು</strong>: ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತ ಸಮೀಪದ 515 ಆರ್ಮಿ ಬೇಸ್ ವರ್ಕ್ಶಾಪ್ನಲ್ಲಿರುವ ‘ಈಗಲ್ ನೆಸ್ಟ್ ಲೇಕ್’ನ ಎಲ್ಲ ಕಲ್ಮಶಗಳನ್ನು ನಿವಾರಿಸಿ, ಸ್ವಚ್ಛ ನೀರಿನ ಸಂಗ್ರಹ ತಾಣವನ್ನಾಗಿಸಲಾಗಿದೆ.</p>.<p>ಎಂಟು ಎಕರೆ ವಿಸ್ತೀರ್ಣದ ‘ಈಗಲ್ಸ್ ನೆಸ್ಟ್ ಲೇಕ್’ ಹಲವು ವರ್ಷಗಳಿಂದ ಕಲುಷಿತಗೊಂಡಿತ್ತು. ಗಿಡಗಳು ಬೆಳೆದು ಪೊದೆಗಳು ಬೆಳೆದಿದ್ದವು. ಭಾರತೀಯ ಸೇನೆ, 3ಒನ್4 ಕ್ಯಾಪಿಟಲ್ ಮತ್ತು ದಟ್ಸ್ ಇಕೊ ಫೌಂಡೇಷನ್ ವತಿಯಿಂದ ‘ಹ್ಯಾಂಡ್ಸ್ ಆನ್ ಸಿಎಸ್ಆರ್’ ಉಪಕ್ರಮದಡಿ ಈ ಕೆರೆಯ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿತ್ತು.</p>.<p>ಮಾಲಿನ್ಯ, ಪರಿಸರಕ್ಕೆ ಹಾನಿ ಉಂಟು ಮಾಡುವ ಜಲಚರಗಳು ಮತ್ತು ಕಡಿಮೆಯಾದ ನೀರಿನ ಸಾಮರ್ಥ್ಯದಿಂದ ‘ಈಗಲ್ಸ್ ನೆಸ್ಟ್ ಲೇಕ್’ ಹಾಳಾಗಿತ್ತು. 2024ರ ಮಾರ್ಚ್ 25ರಂದು ಆರಂಭವಾದ ಜಂಟಿ ಸಹಭಾಗಿತ್ವದ ಕಾಮಗಾರಿಯಿಂದ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.</p>.<p>ಕೆರೆಯ ಪುನಶ್ಚೇತನ ಕಾಮಗಾರಿ ಮುಗಿದ ಸಂದರ್ಭದಲ್ಲಿ ಅದನ್ನು ಅನಾವರಣಗೊಳಿಸಿದ ಲೆಫ್ಟಿನೆಂಟ್ ಜನರಲ್ ಕರಣ್ಬೀರ್ ಸಿಂಗ್ ಬ್ರಾರ್ ಮಾತನಾಡಿ, ‘ಕೆರೆ ಪುನಶ್ಚೇತನದಿಂದ ಪರಿಸರ ಆಸ್ತಿಯನ್ನು ಮರುಸ್ಥಾಪಿಸಿದಂತಾಗಿದೆ. ನಮ್ಮ ಕುಟುಂಬದ ಸದಸ್ಯರಿಗಾಗಿ ಪ್ರಶಾಂತ ಮನರಂಜನಾ ಸ್ಥಳವೊಂದು ಈಗ ಹೊಸದಾಗಿ ಸೃಷ್ಟಿಯಾಗಿದೆ’ ಎಂದರು.</p>.<p>‘ಜನರಲ್ ಬ್ರಾರ್ ಸಿಂಗ್ ನೇತೃತ್ವದಲ್ಲಿ ನಡೆದ ಪುನಶ್ಚೇತನ ಕಾರ್ಯದಲ್ಲಿ ಭಾರತೀಯ ಸೇನೆ, 3ಒನ್4 ಕ್ಯಾಪಿಟಲ್ನ ಸಿದ್ಧಾರ್ಥ ಪೈ ಮತ್ತು ಗುರುನಂದನ್ ರಾವ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು’ ಎಂದು ಮಾಹಿತಿ ನೀಡಿದರು.</p>.<p>3ಒನ್4 ಕ್ಯಾಪಿಟಲ್ನ ಸಂಸ್ಥಾಪಕ ಪಾಲುದಾರರಾದ ಸಿದ್ಧಾರ್ಥ ಪೈ ಮಾತನಾಡಿ, ‘ಈ ಪುನಶ್ಚೇತನ ಕೆಲಸದಲ್ಲಿ ನೀರಿನ ಗುಣಮಟ್ಟ ಸುಧಾರಣೆಯಾಗಿದೆ ಮತ್ತು ಜೀವವೈವಿಧ್ಯ ಹೆಚ್ಚಾಗಿದೆ. ಮಹತ್ವದ ಪಾರಿಸರಿಕ ಸವಾಲುಗಳ ಎದುರಿಸುವಲ್ಲಿನ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಕಾರ್ಯಕ್ರಮಗಳಿಗೆ ಈ ಯೋಜನೆ ಉತ್ತಮ ನಿದರ್ಶನವಾಗಿದೆʼ ಎಂದು ಹೇಳಿದರು.</p>.<p>ದಟ್ಸ್ ಇಕೊ ಫೌಂಡೇಷನ್ನ ಹ್ಯಾಂಡ್ಸ್ ಆನ್ ಸಿಎಸ್ಆರ್ನ ಟ್ರಸ್ಟಿಗಳಾದ ಗುರುನಂದನ್ ರಾವ್ ಮತ್ತು ಹರ್ಷ ತೇಜ್, ಮೇಜರ್ ಜನರಲ್ ವಿಟಿ ಮ್ಯಾಥ್ಯೂಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತ ಸಮೀಪದ 515 ಆರ್ಮಿ ಬೇಸ್ ವರ್ಕ್ಶಾಪ್ನಲ್ಲಿರುವ ‘ಈಗಲ್ ನೆಸ್ಟ್ ಲೇಕ್’ನ ಎಲ್ಲ ಕಲ್ಮಶಗಳನ್ನು ನಿವಾರಿಸಿ, ಸ್ವಚ್ಛ ನೀರಿನ ಸಂಗ್ರಹ ತಾಣವನ್ನಾಗಿಸಲಾಗಿದೆ.</p>.<p>ಎಂಟು ಎಕರೆ ವಿಸ್ತೀರ್ಣದ ‘ಈಗಲ್ಸ್ ನೆಸ್ಟ್ ಲೇಕ್’ ಹಲವು ವರ್ಷಗಳಿಂದ ಕಲುಷಿತಗೊಂಡಿತ್ತು. ಗಿಡಗಳು ಬೆಳೆದು ಪೊದೆಗಳು ಬೆಳೆದಿದ್ದವು. ಭಾರತೀಯ ಸೇನೆ, 3ಒನ್4 ಕ್ಯಾಪಿಟಲ್ ಮತ್ತು ದಟ್ಸ್ ಇಕೊ ಫೌಂಡೇಷನ್ ವತಿಯಿಂದ ‘ಹ್ಯಾಂಡ್ಸ್ ಆನ್ ಸಿಎಸ್ಆರ್’ ಉಪಕ್ರಮದಡಿ ಈ ಕೆರೆಯ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿತ್ತು.</p>.<p>ಮಾಲಿನ್ಯ, ಪರಿಸರಕ್ಕೆ ಹಾನಿ ಉಂಟು ಮಾಡುವ ಜಲಚರಗಳು ಮತ್ತು ಕಡಿಮೆಯಾದ ನೀರಿನ ಸಾಮರ್ಥ್ಯದಿಂದ ‘ಈಗಲ್ಸ್ ನೆಸ್ಟ್ ಲೇಕ್’ ಹಾಳಾಗಿತ್ತು. 2024ರ ಮಾರ್ಚ್ 25ರಂದು ಆರಂಭವಾದ ಜಂಟಿ ಸಹಭಾಗಿತ್ವದ ಕಾಮಗಾರಿಯಿಂದ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.</p>.<p>ಕೆರೆಯ ಪುನಶ್ಚೇತನ ಕಾಮಗಾರಿ ಮುಗಿದ ಸಂದರ್ಭದಲ್ಲಿ ಅದನ್ನು ಅನಾವರಣಗೊಳಿಸಿದ ಲೆಫ್ಟಿನೆಂಟ್ ಜನರಲ್ ಕರಣ್ಬೀರ್ ಸಿಂಗ್ ಬ್ರಾರ್ ಮಾತನಾಡಿ, ‘ಕೆರೆ ಪುನಶ್ಚೇತನದಿಂದ ಪರಿಸರ ಆಸ್ತಿಯನ್ನು ಮರುಸ್ಥಾಪಿಸಿದಂತಾಗಿದೆ. ನಮ್ಮ ಕುಟುಂಬದ ಸದಸ್ಯರಿಗಾಗಿ ಪ್ರಶಾಂತ ಮನರಂಜನಾ ಸ್ಥಳವೊಂದು ಈಗ ಹೊಸದಾಗಿ ಸೃಷ್ಟಿಯಾಗಿದೆ’ ಎಂದರು.</p>.<p>‘ಜನರಲ್ ಬ್ರಾರ್ ಸಿಂಗ್ ನೇತೃತ್ವದಲ್ಲಿ ನಡೆದ ಪುನಶ್ಚೇತನ ಕಾರ್ಯದಲ್ಲಿ ಭಾರತೀಯ ಸೇನೆ, 3ಒನ್4 ಕ್ಯಾಪಿಟಲ್ನ ಸಿದ್ಧಾರ್ಥ ಪೈ ಮತ್ತು ಗುರುನಂದನ್ ರಾವ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು’ ಎಂದು ಮಾಹಿತಿ ನೀಡಿದರು.</p>.<p>3ಒನ್4 ಕ್ಯಾಪಿಟಲ್ನ ಸಂಸ್ಥಾಪಕ ಪಾಲುದಾರರಾದ ಸಿದ್ಧಾರ್ಥ ಪೈ ಮಾತನಾಡಿ, ‘ಈ ಪುನಶ್ಚೇತನ ಕೆಲಸದಲ್ಲಿ ನೀರಿನ ಗುಣಮಟ್ಟ ಸುಧಾರಣೆಯಾಗಿದೆ ಮತ್ತು ಜೀವವೈವಿಧ್ಯ ಹೆಚ್ಚಾಗಿದೆ. ಮಹತ್ವದ ಪಾರಿಸರಿಕ ಸವಾಲುಗಳ ಎದುರಿಸುವಲ್ಲಿನ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಕಾರ್ಯಕ್ರಮಗಳಿಗೆ ಈ ಯೋಜನೆ ಉತ್ತಮ ನಿದರ್ಶನವಾಗಿದೆʼ ಎಂದು ಹೇಳಿದರು.</p>.<p>ದಟ್ಸ್ ಇಕೊ ಫೌಂಡೇಷನ್ನ ಹ್ಯಾಂಡ್ಸ್ ಆನ್ ಸಿಎಸ್ಆರ್ನ ಟ್ರಸ್ಟಿಗಳಾದ ಗುರುನಂದನ್ ರಾವ್ ಮತ್ತು ಹರ್ಷ ತೇಜ್, ಮೇಜರ್ ಜನರಲ್ ವಿಟಿ ಮ್ಯಾಥ್ಯೂಸ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>