<p><strong>ಬೆಂಗಳೂರು:</strong> ಕೊರೊನಾ ಸೋಂಕು ಶಂಕಿತರು ಪ್ರಮುಖವಾಗಿ ತೆರಳುವ ನಗರದ ರಾಜೀವ್ ಗಾಂಧಿ ಹೃದಯ ಕಾಯಿಲೆ ಸಂಸ್ಥೆಯ (ಆರ್ಜಿಐಸಿಡಿ) ಭದ್ರತಾ ಸಿಬ್ಬಂದಿ ಮೂರು ತಿಂಗಳಿಂದ ಸಂಬಳದಿಂದ ವಂಚಿತರಾಗಿದ್ದು,ತಕ್ಷಣ ವೇತನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.</p>.<p>‘ಭದ್ರತಾ ಸೇವೆ ನೀಡುವ ಏಜೆನ್ಸಿಗೆ ಸಿಬ್ಬಂದಿಯ ಸಂಬಳದ ಮೊತ್ತವನ್ನು ಸಂಸ್ಥೆ ಈಗಾಗಲೇ ನೀಡಿದೆ, ಆದರೆ, ಈ ಏಜೆನ್ಸಿಯವರು ಭವಿಷ್ಯ ನಿಧಿಯಂತಹ ಅಗತ್ಯದ ಮಾಹಿತಿ ನೀಡದೆ ಸತಾಯಿಸುತ್ತಿದ್ದರು. ಸಿಬ್ಬಂದಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅವರಿಗೆ ತಕ್ಷಣ ವೇತನ ನೀಡಲಾಗುವುದು, ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಶಂಕಿತಕೊರೊನಾ ಸೋಂಕಿಗೆ ಒಳಗಾದವರನ್ನು ಮೊದಲು ಭೇಟಿಯಾಗುವುದೇ ಈ ಭದ್ರತಾ ಸಿಬ್ಬಂದಿ. ಸೋಂಕು ಹರಡದಂತೆ ಶಂಕಿತರ ಮೇಲೆ ಔಷಧ ಸಿಂಪಡಿಸುವ ಕೆಲಸವನ್ನೂ ಇವರು ನಿರ್ವಹಿಸುತ್ತಾರೆ. ಇಲ್ಲಿ ಇಂತಹ 30 ಸಿಬ್ಬಂದಿ ಇದ್ದು, ಅವರ ವೇತನ ಕೇವಲ ₹ 10,500. ಆದರೆ, ಡಿಸೆಂಬರ್ನಿಂದೀಚೆಗೆ ಇವರಿಗೆ ವೇತನ ನೀಡಿರಲಿಲ್ಲ.</p>.<p>‘ನಾನು ಈ ಸಂಸ್ಥೆಗೆ ಹೋಗುತ್ತಲೇ ಇದ್ದೇನೆ. ಶುಕ್ರವಾರ ಸಹ ಅಲ್ಲಿಗೆ ಹೋಗಿದ್ದೆ, ಆದರೆ, ನನ್ನ ಗಮನಕ್ಕೆ ಯಾರೂ ಈ ವಿಷಯ ತಂದಿರಲಿಲ್ಲ. ಇದೀಗ ಮನವರಿಕೆಯಾಗಿದ್ದು, ತಕ್ಷಣ ಸಂಬಳ ನೀಡುವಂತೆ ಸೂಚನೆ ನೀಡಲಿದ್ದೇನೆ. ಕೊರೊನಾ ನಿಯಂತ್ರಣದಲ್ಲಿ ಈ ಸಿಬ್ಬಂದಿಯ ಪಾತ್ರವೂ ದೊಡ್ಡದಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದರು.</p>.<p>*<br />ಇದುವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ, ಭದ್ರತಾ ಸಿಬ್ಬಂದಿಗೆ ತಕ್ಷಣ ಸಂಬಳ ಕೊಡಿಸಲು ತಿಳಿಸುತ್ತೇನೆ.<br /><em><strong>–ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊರೊನಾ ಸೋಂಕು ಶಂಕಿತರು ಪ್ರಮುಖವಾಗಿ ತೆರಳುವ ನಗರದ ರಾಜೀವ್ ಗಾಂಧಿ ಹೃದಯ ಕಾಯಿಲೆ ಸಂಸ್ಥೆಯ (ಆರ್ಜಿಐಸಿಡಿ) ಭದ್ರತಾ ಸಿಬ್ಬಂದಿ ಮೂರು ತಿಂಗಳಿಂದ ಸಂಬಳದಿಂದ ವಂಚಿತರಾಗಿದ್ದು,ತಕ್ಷಣ ವೇತನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.</p>.<p>‘ಭದ್ರತಾ ಸೇವೆ ನೀಡುವ ಏಜೆನ್ಸಿಗೆ ಸಿಬ್ಬಂದಿಯ ಸಂಬಳದ ಮೊತ್ತವನ್ನು ಸಂಸ್ಥೆ ಈಗಾಗಲೇ ನೀಡಿದೆ, ಆದರೆ, ಈ ಏಜೆನ್ಸಿಯವರು ಭವಿಷ್ಯ ನಿಧಿಯಂತಹ ಅಗತ್ಯದ ಮಾಹಿತಿ ನೀಡದೆ ಸತಾಯಿಸುತ್ತಿದ್ದರು. ಸಿಬ್ಬಂದಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅವರಿಗೆ ತಕ್ಷಣ ವೇತನ ನೀಡಲಾಗುವುದು, ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಶಂಕಿತಕೊರೊನಾ ಸೋಂಕಿಗೆ ಒಳಗಾದವರನ್ನು ಮೊದಲು ಭೇಟಿಯಾಗುವುದೇ ಈ ಭದ್ರತಾ ಸಿಬ್ಬಂದಿ. ಸೋಂಕು ಹರಡದಂತೆ ಶಂಕಿತರ ಮೇಲೆ ಔಷಧ ಸಿಂಪಡಿಸುವ ಕೆಲಸವನ್ನೂ ಇವರು ನಿರ್ವಹಿಸುತ್ತಾರೆ. ಇಲ್ಲಿ ಇಂತಹ 30 ಸಿಬ್ಬಂದಿ ಇದ್ದು, ಅವರ ವೇತನ ಕೇವಲ ₹ 10,500. ಆದರೆ, ಡಿಸೆಂಬರ್ನಿಂದೀಚೆಗೆ ಇವರಿಗೆ ವೇತನ ನೀಡಿರಲಿಲ್ಲ.</p>.<p>‘ನಾನು ಈ ಸಂಸ್ಥೆಗೆ ಹೋಗುತ್ತಲೇ ಇದ್ದೇನೆ. ಶುಕ್ರವಾರ ಸಹ ಅಲ್ಲಿಗೆ ಹೋಗಿದ್ದೆ, ಆದರೆ, ನನ್ನ ಗಮನಕ್ಕೆ ಯಾರೂ ಈ ವಿಷಯ ತಂದಿರಲಿಲ್ಲ. ಇದೀಗ ಮನವರಿಕೆಯಾಗಿದ್ದು, ತಕ್ಷಣ ಸಂಬಳ ನೀಡುವಂತೆ ಸೂಚನೆ ನೀಡಲಿದ್ದೇನೆ. ಕೊರೊನಾ ನಿಯಂತ್ರಣದಲ್ಲಿ ಈ ಸಿಬ್ಬಂದಿಯ ಪಾತ್ರವೂ ದೊಡ್ಡದಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದರು.</p>.<p>*<br />ಇದುವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ, ಭದ್ರತಾ ಸಿಬ್ಬಂದಿಗೆ ತಕ್ಷಣ ಸಂಬಳ ಕೊಡಿಸಲು ತಿಳಿಸುತ್ತೇನೆ.<br /><em><strong>–ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>