‘ಭದ್ರತಾ ಸೇವೆ ನೀಡುವ ಏಜೆನ್ಸಿಗೆ ಸಿಬ್ಬಂದಿಯ ಸಂಬಳದ ಮೊತ್ತವನ್ನು ಸಂಸ್ಥೆ ಈಗಾಗಲೇ ನೀಡಿದೆ, ಆದರೆ, ಈ ಏಜೆನ್ಸಿಯವರು ಭವಿಷ್ಯ ನಿಧಿಯಂತಹ ಅಗತ್ಯದ ಮಾಹಿತಿ ನೀಡದೆ ಸತಾಯಿಸುತ್ತಿದ್ದರು. ಸಿಬ್ಬಂದಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅವರಿಗೆ ತಕ್ಷಣ ವೇತನ ನೀಡಲಾಗುವುದು, ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.