‘ರಾಮಚಂದ್ರ ಅವರಿಂದ ₹ 20 ಲಕ್ಷ ಪಡೆದಿದ್ದ ಮಹಿಳೆ, ಅದನ್ನು ವಾಪಸು ಕೊಟ್ಟಿರಲಿಲ್ಲ. ಇತ್ತೀಚೆಗೆ ಲ್ಯಾಬ್ ವರದಿ ತೋರಿಸಿದ್ದ ಸಂತ್ರಸ್ತೆ, ತಾವು ಗರ್ಭಿಣಿ ಎಂಬುದಾಗಿ ಹೇಳಿದ್ದರು. ರಾಮಚಂದ್ರ ಅವರೇ ತಂದೆ ಎಂಬುದಾಗಿ ತಿಳಿಸಿದ್ದರು. ಸಂತ್ರಸ್ತೆ ಹಾಗೂ ಅವರ ಸಂಬಂಧಿಕರು, ರಾಮಚಂದ್ರ ಜೊತೆ ಗಲಾಟೆ ಮಾಡಿದ್ದರು. ಜೀವನಾಂಶಕ್ಕೆ ₹ 10 ಕೋಟಿ ನೀಡಬೇಕೆಂದು ಬೇಡಿಕೆ ಇರಿಸಿದ್ದರು’ ಎಂದು ಮೂಲಗಳು ತಿಳಿಸಿವೆ.