‘ಮೆಂಡಲೀಜ್ ವತಿಯಿಂದ ಈಗಾಗಲೇ 600 ಎಂಎಲ್ಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೋರ್ಡ್ಗಳಾಗಿ ಪರಿವರ್ತಿಸಲಾಗಿದೆ. ಸಿದ್ಧಾರ್ಥನಗರ, ಎಂ.ಎಸ್. ಪಾಳ್ಯದ ಸರ್ಕಾರಿ ಶಾಲೆ, ಆರ್.ಕೆ. ಸ್ಕೂಲ್, ಜೊಲಿ ಮೊಹಲ್ಲಾ ಮತ್ತು ಸಾರಕ್ಕಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಟೇಬಲ್, ಕುರ್ಚಿಗಳನ್ನು ‘ಡಬ್ಲ್ಯುಒಡಬ್ಲ್ಯು ಬೋರ್ಡ್’ಗಳಲ್ಲಿ ತಯಾರಿಸಿ ನೀಡಲಾಗಿದೆ. ಸ್ವಚ್ಛ ಕಲಿಕಾ ಕೇಂದ್ರದಲ್ಲಿ ಇದೇ ಬೋರ್ಡ್ಗಳಿಂದ ಚಾವಣಿಯನ್ನೂ ನಿರ್ಮಿಸಲಾಗಿದೆ. ಆಡುಗೋಡಿಯಲ್ಲಿರುವ ನಗರ ಮೀಸಲು ಶಸ್ತ್ರಾಸ್ತ್ರ ಕೇಂದ್ರದ ಆವರಣದಲ್ಲಿ ಕಾರ್ಮಿಕರಿಗೆ ಕೊಠಡಿಯನ್ನೂ ನಿರ್ಮಿಸಿಕೊಡಲಾಗಿದೆ’ ಎಂದರು.