ಗೋವಿಂದಪ್ಪ ಶ್ರೀಹರಿ ಅವರು ಸಾಲಬಾಧೆಯಿಂದ ನೇಣಿಗೆ ಕೊರಳೊಡ್ಡುವ ಪರಿಸ್ಥಿತಿಗೆ ಬಂದಿದ್ದರು. ಅವರು ಕುಮಾರಸ್ವಾಮಿಯವರಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದೇನೆಂದು ಪತ್ರ ಬರೆದಿದ್ದರು. ಪತ್ರದಲ್ಲಿದ್ದ ಫೋನ್ ನಂಬರ್ಗೆತಕ್ಷಣವೇ ಫೋನಾಯಿಸಿದ್ದ ಅವರು, ಸಾಲಮನ್ನಾ ಆಗುತ್ತದೆ, ಆತ್ಮಹತ್ಯೆಯಂತಹ ನಿರ್ಧಾರ ಮಾಡ
ಬಾರದೆಂದು ಸಾಂತ್ವನ ಹೇಳಿದ್ದರು. ಬಳಿಕ ಸಾಲಮನ್ನಾವೂ ಆಯಿತು. ಇದೇ ಖುಷಿಯಲ್ಲಿ ಬಂದ ಫಸಲಿನಿಂದ ರೊಟ್ಟಿ ತಯಾರಿಸಿ ಪಾರ್ಸೆಲ್ ಮಾಡಿ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.