<p><strong>ಬೆಂಗಳೂರು: </strong>ರಾಜ್ಯದಲ್ಲಿ ಅಪರಾಧ ಕೃತ್ಯ ಎಸಗುವ ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರಿಗೆ ಕಲಬುರ್ಗಿಯಿಂದ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಸಂಗತಿ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.</p>.<p>ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್ನನ್ನೂ ಸೆರೆ ಹಿಡಿದಿದ್ದಾರೆ.</p>.<p>‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ 3 ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p>‘4 ಕೊಲೆ ಪ್ರಕರಣಗಳು, ಕೊಲೆ ಯತ್ನ, ಅಪಹರಣ, ಜೀವ ಬೆದರಿಕೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣದಲ್ಲಿ ಸತೀಶ್ ಭಾಗಿ<br />ಯಾಗಿದ್ದ. ಇತ್ತೀಚೆಗೆ ಅಪರಾಧ ಕೃತ್ಯಗಳಿಂದ ದೂರವಾಗಿದ್ದ. ಅದರ ಬದಲು, ಶಸ್ತ್ರಾಸ್ತ್ರ ಮಾರಾಟ ದಂಧೆಗೆ ಇಳಿದಿದ್ದ.’</p>.<p>‘ಮಧ್ಯಪ್ರದೇಶದ ಶಸ್ತ್ರಾಸ್ತ್ರ ತಯಾರಿಸುವವರ ಜೊತೆ ನಂಟು ಹೊಂದಿ, ಅವರಿಂದ ಪಿಸ್ತೂಲ್ ಖರೀದಿಸುತ್ತಿದ್ದ. ಅದನ್ನೇ ರಾಜ್ಯದ ರೌಡಿಗಳು ಹಾಗೂ ಅವರ ಗ್ಯಾಂಗ್ಗಳಿಗೆ ಮಾರಾಟ ಮಾಡುತ್ತಿದ್ದ. ಅದೇ ಪಿಸ್ತೂಲ್ ಇಟ್ಟುಕೊಂಡು ರೌಡಿ ಗ್ಯಾಂಗ್ಗಳು ಸಾರ್ವಜನಿಕರನ್ನು ಬೆದರಿಸುತ್ತಿದ್ದವು’ ಎಂದೂ ತಿಳಿಸಿದರು.</p>.<p>‘ಶಸ್ತ್ರಾಸ್ತ್ರ ಮಾರಾಟ ದಂಧೆಯಿಂದಲೇ ಆರೋಪಿ, ಲಕ್ಷಾಂತರ ರೂಪಾಯಿ ಹಣ ಸಂಪಾದಿಸಿದ್ದಾನೆ. ಬೇನಾಮಿ ಹೆಸರಿನಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಂಡಿರುವ ಮಾಹಿತಿ ಇದೆ’ ಎಂದೂ ಹೇಳಿದರು.</p>.<p class="Subhead"><strong>ಜೈಲಿನಲ್ಲಿ ಪರಿಚಯ:</strong> ‘ಅಪರಾಧ ಕೃತ್ಯದಲ್ಲಿ ಬಂಧಿತರಾಗಿದ್ದ ರೌಡಿ ಲೋಹಿತ್ ಹಾಗೂ ಸತೀಶ್, ಜೈಲಿನಲ್ಲಿಯೇ ಭೇಟಿಯಾಗಿದ್ದರು. ತಾನು ಪಿಸ್ತೂಲ್ ಮಾರಾಟ ಮಾಡುತ್ತಿರುವುದಾಗಿ ಸತೀಶ್ ಹೇಳಿಕೊಂಡಿದ್ದ. ಜಾಮೀನು ಮೇಲೆ ಇಬ್ಬರೂ ಹೊರಗೆ ಬಂದಿದ್ದರು’ ಎಂದೂ ಹೇಳಿದರು.</p>.<p>‘ಸೋಮನನ್ನು ಹತ್ಯೆ ಮಾಡಲು ಮುಂದಾಗಿದ್ದ ರೋಹಿತ್, ಸತೀಶ್ಗೆ ₹ 2 ಲಕ್ಷ ಕೊಟ್ಟು ಪಿಸ್ತೂಲ್ ಪಡೆದುಕೊಂಡಿದ್ದ’ ಎಂದೂ ತಿಳಿಸಿದರು.</p>.<p><strong>ತರಕಾರಿ ವಾಹನದಲ್ಲಿ ಮದ್ಯ ಸಾಗಣೆ</strong></p>.<p>ಬೆಂಗಳೂರು: ತರಕಾರಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.</p>.<p>‘ರಾಮಕೃಷ್ಣ ಹೆಗಡೆ ನಗರದ ವೇಲು ಐಯ್ಯನಾರ್ (36) ಹಾಗೂ ಸಂತೋಷ್ (20) ಬಂಧಿತರು. ಅವರಿಂದ 276 ಲೀಟರ್ ಮದ್ಯವಿದ್ದ ಬಾಟಲಿಗಳ ಬಾಕ್ಸ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ತರಕಾರಿ ತುಂಬುವ ಬಕೆಟ್ಗಳಲ್ಲಿ ಮದ್ಯದ ಬಾಟಲಿ ಬಾಕ್ಸ್ಗಳನ್ನು ಇರಿಸಲಾಗಿತ್ತು. ನಗರದಿಂದ ತಮಿಳುನಾಡಿಗೆ ಮಹೀಂದ್ರಾ ವಾಹನದಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು.’</p>.<p>‘ಮಾಹಿತಿ ಬರುತ್ತಿದ್ದಂತೆ ವಾಹನವನ್ನು ತಡೆದು ತಪಾಸಣೆ ನಡೆಸಲಾಯಿತು. ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದಲ್ಲಿ ಅಪರಾಧ ಕೃತ್ಯ ಎಸಗುವ ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರಿಗೆ ಕಲಬುರ್ಗಿಯಿಂದ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಸಂಗತಿ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.</p>.<p>ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್ ಸತೀಶ್ನನ್ನೂ ಸೆರೆ ಹಿಡಿದಿದ್ದಾರೆ.</p>.<p>‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ 3 ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p>‘4 ಕೊಲೆ ಪ್ರಕರಣಗಳು, ಕೊಲೆ ಯತ್ನ, ಅಪಹರಣ, ಜೀವ ಬೆದರಿಕೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣದಲ್ಲಿ ಸತೀಶ್ ಭಾಗಿ<br />ಯಾಗಿದ್ದ. ಇತ್ತೀಚೆಗೆ ಅಪರಾಧ ಕೃತ್ಯಗಳಿಂದ ದೂರವಾಗಿದ್ದ. ಅದರ ಬದಲು, ಶಸ್ತ್ರಾಸ್ತ್ರ ಮಾರಾಟ ದಂಧೆಗೆ ಇಳಿದಿದ್ದ.’</p>.<p>‘ಮಧ್ಯಪ್ರದೇಶದ ಶಸ್ತ್ರಾಸ್ತ್ರ ತಯಾರಿಸುವವರ ಜೊತೆ ನಂಟು ಹೊಂದಿ, ಅವರಿಂದ ಪಿಸ್ತೂಲ್ ಖರೀದಿಸುತ್ತಿದ್ದ. ಅದನ್ನೇ ರಾಜ್ಯದ ರೌಡಿಗಳು ಹಾಗೂ ಅವರ ಗ್ಯಾಂಗ್ಗಳಿಗೆ ಮಾರಾಟ ಮಾಡುತ್ತಿದ್ದ. ಅದೇ ಪಿಸ್ತೂಲ್ ಇಟ್ಟುಕೊಂಡು ರೌಡಿ ಗ್ಯಾಂಗ್ಗಳು ಸಾರ್ವಜನಿಕರನ್ನು ಬೆದರಿಸುತ್ತಿದ್ದವು’ ಎಂದೂ ತಿಳಿಸಿದರು.</p>.<p>‘ಶಸ್ತ್ರಾಸ್ತ್ರ ಮಾರಾಟ ದಂಧೆಯಿಂದಲೇ ಆರೋಪಿ, ಲಕ್ಷಾಂತರ ರೂಪಾಯಿ ಹಣ ಸಂಪಾದಿಸಿದ್ದಾನೆ. ಬೇನಾಮಿ ಹೆಸರಿನಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಂಡಿರುವ ಮಾಹಿತಿ ಇದೆ’ ಎಂದೂ ಹೇಳಿದರು.</p>.<p class="Subhead"><strong>ಜೈಲಿನಲ್ಲಿ ಪರಿಚಯ:</strong> ‘ಅಪರಾಧ ಕೃತ್ಯದಲ್ಲಿ ಬಂಧಿತರಾಗಿದ್ದ ರೌಡಿ ಲೋಹಿತ್ ಹಾಗೂ ಸತೀಶ್, ಜೈಲಿನಲ್ಲಿಯೇ ಭೇಟಿಯಾಗಿದ್ದರು. ತಾನು ಪಿಸ್ತೂಲ್ ಮಾರಾಟ ಮಾಡುತ್ತಿರುವುದಾಗಿ ಸತೀಶ್ ಹೇಳಿಕೊಂಡಿದ್ದ. ಜಾಮೀನು ಮೇಲೆ ಇಬ್ಬರೂ ಹೊರಗೆ ಬಂದಿದ್ದರು’ ಎಂದೂ ಹೇಳಿದರು.</p>.<p>‘ಸೋಮನನ್ನು ಹತ್ಯೆ ಮಾಡಲು ಮುಂದಾಗಿದ್ದ ರೋಹಿತ್, ಸತೀಶ್ಗೆ ₹ 2 ಲಕ್ಷ ಕೊಟ್ಟು ಪಿಸ್ತೂಲ್ ಪಡೆದುಕೊಂಡಿದ್ದ’ ಎಂದೂ ತಿಳಿಸಿದರು.</p>.<p><strong>ತರಕಾರಿ ವಾಹನದಲ್ಲಿ ಮದ್ಯ ಸಾಗಣೆ</strong></p>.<p>ಬೆಂಗಳೂರು: ತರಕಾರಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.</p>.<p>‘ರಾಮಕೃಷ್ಣ ಹೆಗಡೆ ನಗರದ ವೇಲು ಐಯ್ಯನಾರ್ (36) ಹಾಗೂ ಸಂತೋಷ್ (20) ಬಂಧಿತರು. ಅವರಿಂದ 276 ಲೀಟರ್ ಮದ್ಯವಿದ್ದ ಬಾಟಲಿಗಳ ಬಾಕ್ಸ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ತರಕಾರಿ ತುಂಬುವ ಬಕೆಟ್ಗಳಲ್ಲಿ ಮದ್ಯದ ಬಾಟಲಿ ಬಾಕ್ಸ್ಗಳನ್ನು ಇರಿಸಲಾಗಿತ್ತು. ನಗರದಿಂದ ತಮಿಳುನಾಡಿಗೆ ಮಹೀಂದ್ರಾ ವಾಹನದಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು.’</p>.<p>‘ಮಾಹಿತಿ ಬರುತ್ತಿದ್ದಂತೆ ವಾಹನವನ್ನು ತಡೆದು ತಪಾಸಣೆ ನಡೆಸಲಾಯಿತು. ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>