<p><strong>ಬೆಂಗಳೂರು:</strong> ಎದುರಾಳಿಯನ್ನು ಹತ್ಯೆ ಮಾಡಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಅಲಿಯಾಸ್ ಕಾಡುಬಿಸನಹಳ್ಳಿ ರೋಹಿತ್ಗೌಡ (29) ಹಾಗೂ ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.</p>.<p>‘ಕಾಡುಬಿಸನಹಳ್ಳಿಯ ರೌಡಿ ಸೋಮನನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಬಂಧಿತ ಆರೋಪಿಗಳಿಂದ ಪಿಸ್ತೂಲ್, ಜೀವಂತ ಗುಂಡು, 10 ಮಚ್ಚುಗಳು ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p><strong>ಎರಡು ವರ್ಷಗಳ ದ್ವೇಷ:</strong> ‘ರೌಡಿ ರೋಹಿತ್ನ ಅಣ್ಣನನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ಇದರಲ್ಲಿ ರೌಡಿ ಸೋಮನ ಹೆಸರು ಕೇಳಿಬಂದಿತ್ತು. ಮರು ವರ್ಷವೇ ಸೋಮನ ತಮ್ಮ ಮಂಜನ ಕೊಲೆಯಾಗಿತ್ತು. ಅದರಲ್ಲಿ ರೋಹಿತ್ ಹೆಸರು ಕೇಳಿಬಂದಿತ್ತು’ ಎಂದು ಪೊಲೀಸರು ತಿಳಿಸಿದರು.</p>.<p>‘ಸೋಮ ಹಾಗೂ ರೋಹಿತ್ ನಡುವೆ ಎರಡು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಒಬ್ಬರಿಗೊಬ್ಬರು ಹತ್ಯೆ ಮಾಡಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಲೇ ಇದ್ದರು’ ಎಂದರು.</p>.<p><strong>ಗ್ಯಾಂಗ್ ಕಟ್ಟಿದ್ದ ರೋಹಿತ್:</strong> ‘ರೌಡಿ ಅಮರನಾಥ್, ಮುನಿರಾಜು, ವಿಘ್ನೇಶ್, ಕಾಂತರಾಜು, ಹರೀಶ್, ಪ್ರಶಾಂತ್ಕುಮಾರ್, ಜಮೀರ್, ಚಂದನ್, ಗಂಗರಾಜು, ಮಂಜುನಾಥ್ನನ್ನು ಸೇರಿಸಿಕೊಂಡು ರೋಹಿತ್ ಗ್ಯಾಂಗ್ ಕಟ್ಟಿದ್ದ’ ಎಂದೂ ಪೊಲೀಸರು ಹೇಳಿದರು.</p>.<p>‘ಗುರುವಾರ ಬೆಳಿಗ್ಗೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಿಂದ ರವೀಂದ್ರನಗರದತ್ತ ಹೋಗುವ ರಸ್ತೆಯಲ್ಲಿ ಆರೋಪಿಗಳು ನಿಂತಿದ್ದರು. ಅದೇ ರಸ್ತೆಯಲ್ಲೇ ಸೋಮ ಬರುವುದನ್ನು ಕಾಯುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಎದುರಾಳಿಯನ್ನು ಹತ್ಯೆ ಮಾಡಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್ ಅಲಿಯಾಸ್ ಕಾಡುಬಿಸನಹಳ್ಳಿ ರೋಹಿತ್ಗೌಡ (29) ಹಾಗೂ ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.</p>.<p>‘ಕಾಡುಬಿಸನಹಳ್ಳಿಯ ರೌಡಿ ಸೋಮನನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಬಂಧಿತ ಆರೋಪಿಗಳಿಂದ ಪಿಸ್ತೂಲ್, ಜೀವಂತ ಗುಂಡು, 10 ಮಚ್ಚುಗಳು ಹಾಗೂ 2 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p><strong>ಎರಡು ವರ್ಷಗಳ ದ್ವೇಷ:</strong> ‘ರೌಡಿ ರೋಹಿತ್ನ ಅಣ್ಣನನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ಇದರಲ್ಲಿ ರೌಡಿ ಸೋಮನ ಹೆಸರು ಕೇಳಿಬಂದಿತ್ತು. ಮರು ವರ್ಷವೇ ಸೋಮನ ತಮ್ಮ ಮಂಜನ ಕೊಲೆಯಾಗಿತ್ತು. ಅದರಲ್ಲಿ ರೋಹಿತ್ ಹೆಸರು ಕೇಳಿಬಂದಿತ್ತು’ ಎಂದು ಪೊಲೀಸರು ತಿಳಿಸಿದರು.</p>.<p>‘ಸೋಮ ಹಾಗೂ ರೋಹಿತ್ ನಡುವೆ ಎರಡು ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಒಬ್ಬರಿಗೊಬ್ಬರು ಹತ್ಯೆ ಮಾಡಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಲೇ ಇದ್ದರು’ ಎಂದರು.</p>.<p><strong>ಗ್ಯಾಂಗ್ ಕಟ್ಟಿದ್ದ ರೋಹಿತ್:</strong> ‘ರೌಡಿ ಅಮರನಾಥ್, ಮುನಿರಾಜು, ವಿಘ್ನೇಶ್, ಕಾಂತರಾಜು, ಹರೀಶ್, ಪ್ರಶಾಂತ್ಕುಮಾರ್, ಜಮೀರ್, ಚಂದನ್, ಗಂಗರಾಜು, ಮಂಜುನಾಥ್ನನ್ನು ಸೇರಿಸಿಕೊಂಡು ರೋಹಿತ್ ಗ್ಯಾಂಗ್ ಕಟ್ಟಿದ್ದ’ ಎಂದೂ ಪೊಲೀಸರು ಹೇಳಿದರು.</p>.<p>‘ಗುರುವಾರ ಬೆಳಿಗ್ಗೆ ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮಲ್ಲಸಂದ್ರದಿಂದ ರವೀಂದ್ರನಗರದತ್ತ ಹೋಗುವ ರಸ್ತೆಯಲ್ಲಿ ಆರೋಪಿಗಳು ನಿಂತಿದ್ದರು. ಅದೇ ರಸ್ತೆಯಲ್ಲೇ ಸೋಮ ಬರುವುದನ್ನು ಕಾಯುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>