‘ಚಿಕ್ಕಪೇಟೆಯ ಬಿ.ಬಿ.ರಸ್ತೆಯಲ್ಲಿ ಮಂಜು ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಟೊ ಹಿಂದಿಕ್ಕುವ ವಿಚಾರಕ್ಕೆ ಆಟೊ ಚಾಲಕ ಹಾಗೂ ಬೈಕ್ನಲ್ಲಿದ್ದ ಅಬ್ದುಲ್ ನಡುವೆ ಗಲಾಟೆ ನಡೆದಿತ್ತು. ಆಗ ಸ್ಥಳಕ್ಕೆ ತೆರಳಿದ್ದ ಮಂಜು ಅವರು ಜಗಳ ಬಿಡಿಸಿ ಇಬ್ಬರಿಗೂ ಬುದ್ಧಿಮಾತು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಅಬ್ದುಲ್, ಕಾನ್ಸ್ಟೆಬಲ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೇ ಅವರನ್ನು ಹಿಂಬಾಲಿಸಿ ಥಳಿಸಿದ್ದ. ಮಂಜು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.