ಶಿಕ್ಷಣ ತಜ್ಞ ಗುರುರಾಜ ಕರಜಗಿ, 'ಸಂಘವು 9ರಿಂದ 10 ವರ್ಷದ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಬೇಕು. ಇದು ಮೌಲ್ಯಗಳು ಸ್ಥಾಪನೆಯಾಗುವ ಸಮಯ. ಮುಂದೆ ಸಂಘ ಗಟ್ಟಿಯಾಗಬೇಕಾದರೆ ಇಂದೇ ಬೀಜ ನೆಡಬೇಕು. ಇದರೊಟ್ಟಿಗೆ ಗೃಹಸಂಪರ್ಕ ಬೆಳೆಸುವುದು ಸಂಘದ ಬಹುದೊಡ್ಡ ಕೆಲಸವಾಗಲಿ.ಮಕ್ಕಳನ್ನು ಟಿ.ವಿ ಹಾಗೂ ಶಿಕ್ಷಣದ ಗೊಂದಲಗಳಿಂದ ಹೊರತಂದು, ವಾರದಲ್ಲಿ ಒಂದು ಅಥವಾ ಎರಡು ದಿನಗಳು ಶಾಖೆಗಳತ್ತ ಬರುವ ಶಿಸ್ತು ಮೂಡಿಸಬೇಕು' ಎಂದು ಸಲಹೆ ನೀಡಿದರು.