<p><strong>ಬೆಂಗಳೂರು</strong>: ‘ಕೃತಕ ಬುದ್ದಿಮತ್ತೆ, ಸೈಬರ್ ಭದ್ರತೆ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿ ಹಲವು ವಿಷಯಗಳಲ್ಲಿ ಶಿಕ್ಷಣ ಪಡೆಯುವ ಜತೆಗೆ ಉನ್ನತ ಅಧ್ಯಯನಕ್ಕೆ ಅವಕಾಶವಿದ್ದು, ವಿದ್ಯಾರ್ಥಿಗಳು ನಿಖರ ಜ್ಞಾನದೊಂದಿಗೆ ಹೊಸ ಮಾರ್ಗ ಕಂಡುಕೊಳ್ಳಲು ಪ್ರೇರೇಪಿಸಬೇಕು’ ಎಂದು ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಡಿ.ಉಲ್ಮನ್ ತಿಳಿಸಿದರು.</p>.<p>ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಸಹಯೋಗದೊಂದಿಗೆ ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಆಯೋಜಿಸಿದ್ದ ಸಂವಾದ, ಭವಿಷ್ಯದ ವೃತ್ತಿಜೀವನ, ಕೃತಕ ಬುದ್ಧಿಮತ್ತೆಯಂತಹ ಅಡ್ಡಿಗಳು ಮತ್ತು ಕಂಪ್ಯೂಟರ್ ವಿಜ್ಞಾನ ಶಿಕ್ಷಣದಿಂದ ಬದಲಾಗುತ್ತಿರುವ ನಿರೀಕ್ಷೆಗಳು ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಕಂಪ್ಯೂಟರ್ ಎಂಜಿನಿಯರಿಂಗ್ ವಿಷಯದಲ್ಲಿ ಕೋರ್ ಪರಿಕಲ್ಪನೆ, ಕಾರ್ಯಕ್ರಮದ ಭಾಷೆ, ಮಾದರಿಯ ಕುರಿತು ಎಲ್ಲ ಆಯಾಮಗಳಲ್ಲೂ ತಿಳಿದುಕೊಳ್ಳಬೇಕು. ಜ್ಞಾನ ಬೇರೆ. ವಿಷಯವನ್ನು ಮೂಲ ಜ್ಞಾನದೊಂದಿಗೆ ವಿಶ್ಲೇಷಿಸುವುದನ್ನು ಕಲಿಯುವುದು ಬೇರೆ’ ಎಂದು ಸಲಹೆ ನೀಡಿದರು.</p>.<p>‘ವಿಷಯದಲ್ಲಿ ನೀವು ಸಂಶೋಧನೆ ಕೈಗೊಳ್ಳುವ ಯೋಚನೆಯಿದ್ದರೆ, ಇದಕ್ಕೆ ವಿಸ್ತೃತ ತಯಾರಿ ಬೇಕಾಗುತ್ತದೆ. ತಾಳ್ಮೆ ಹಾಗೂ ತೊಡಗಿಸಿಕೊಳ್ಳುವಿಕೆ ಅತಿ ಮುಖ್ಯ. ಈಗ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಪ್ರಭಾವ ಎಲ್ಲೆಡೆ ಆಗುತ್ತಿದೆ. ಈ ಕುರಿತು ಭಯ ಬೇಡ. ಅದು ಎಂದಿಗೂ ಮಾನವನ ಜ್ಞಾನಕ್ಕೆ ಸ್ಪರ್ಧೆ ನೀಡಲಾರದು. ಹಾಗೆಂದು ಅದನ್ನು ನಿರ್ಲಕ್ಷಿಸುವಂತೆಯೂ ಇಲ್ಲ’ ಎಂದು ನುಡಿದರು.</p>.<p>ಆರ್ವಿಸಿಇಯ ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಮಣ್ಯಂ ಮತ್ತು ಸುಮುಖಾ ಉಪಾಧ್ಯಾಯ ಅವರ<br />ಮಾರ್ಗದರ್ಶನದಲ್ಲಿ ಸಂವಾದ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಕೃತಕ ಬುದ್ದಿಮತ್ತೆ, ಸೈಬರ್ ಭದ್ರತೆ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿ ಹಲವು ವಿಷಯಗಳಲ್ಲಿ ಶಿಕ್ಷಣ ಪಡೆಯುವ ಜತೆಗೆ ಉನ್ನತ ಅಧ್ಯಯನಕ್ಕೆ ಅವಕಾಶವಿದ್ದು, ವಿದ್ಯಾರ್ಥಿಗಳು ನಿಖರ ಜ್ಞಾನದೊಂದಿಗೆ ಹೊಸ ಮಾರ್ಗ ಕಂಡುಕೊಳ್ಳಲು ಪ್ರೇರೇಪಿಸಬೇಕು’ ಎಂದು ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಡಿ.ಉಲ್ಮನ್ ತಿಳಿಸಿದರು.</p>.<p>ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಸಹಯೋಗದೊಂದಿಗೆ ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಆಯೋಜಿಸಿದ್ದ ಸಂವಾದ, ಭವಿಷ್ಯದ ವೃತ್ತಿಜೀವನ, ಕೃತಕ ಬುದ್ಧಿಮತ್ತೆಯಂತಹ ಅಡ್ಡಿಗಳು ಮತ್ತು ಕಂಪ್ಯೂಟರ್ ವಿಜ್ಞಾನ ಶಿಕ್ಷಣದಿಂದ ಬದಲಾಗುತ್ತಿರುವ ನಿರೀಕ್ಷೆಗಳು ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಕಂಪ್ಯೂಟರ್ ಎಂಜಿನಿಯರಿಂಗ್ ವಿಷಯದಲ್ಲಿ ಕೋರ್ ಪರಿಕಲ್ಪನೆ, ಕಾರ್ಯಕ್ರಮದ ಭಾಷೆ, ಮಾದರಿಯ ಕುರಿತು ಎಲ್ಲ ಆಯಾಮಗಳಲ್ಲೂ ತಿಳಿದುಕೊಳ್ಳಬೇಕು. ಜ್ಞಾನ ಬೇರೆ. ವಿಷಯವನ್ನು ಮೂಲ ಜ್ಞಾನದೊಂದಿಗೆ ವಿಶ್ಲೇಷಿಸುವುದನ್ನು ಕಲಿಯುವುದು ಬೇರೆ’ ಎಂದು ಸಲಹೆ ನೀಡಿದರು.</p>.<p>‘ವಿಷಯದಲ್ಲಿ ನೀವು ಸಂಶೋಧನೆ ಕೈಗೊಳ್ಳುವ ಯೋಚನೆಯಿದ್ದರೆ, ಇದಕ್ಕೆ ವಿಸ್ತೃತ ತಯಾರಿ ಬೇಕಾಗುತ್ತದೆ. ತಾಳ್ಮೆ ಹಾಗೂ ತೊಡಗಿಸಿಕೊಳ್ಳುವಿಕೆ ಅತಿ ಮುಖ್ಯ. ಈಗ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಪ್ರಭಾವ ಎಲ್ಲೆಡೆ ಆಗುತ್ತಿದೆ. ಈ ಕುರಿತು ಭಯ ಬೇಡ. ಅದು ಎಂದಿಗೂ ಮಾನವನ ಜ್ಞಾನಕ್ಕೆ ಸ್ಪರ್ಧೆ ನೀಡಲಾರದು. ಹಾಗೆಂದು ಅದನ್ನು ನಿರ್ಲಕ್ಷಿಸುವಂತೆಯೂ ಇಲ್ಲ’ ಎಂದು ನುಡಿದರು.</p>.<p>ಆರ್ವಿಸಿಇಯ ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಮಣ್ಯಂ ಮತ್ತು ಸುಮುಖಾ ಉಪಾಧ್ಯಾಯ ಅವರ<br />ಮಾರ್ಗದರ್ಶನದಲ್ಲಿ ಸಂವಾದ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>