<p><strong>ಬೆಂಗಳೂರು: </strong>‘ನಾಥೂರಾಮ್ ಗೋಡ್ಸೆಯನ್ನೂ ದೇಶಭಕ್ತ ಎನ್ನುವ ಹಂತಕ್ಕೆ ದೇಶ ತಲುಪಿದೆ. ಗಾಂಧಿ ಹಾಗೂ ಗೋಡ್ಸೆ ನಡುವೆ, ಗೋಡ್ಸೆಯನ್ನು ಆಯ್ಕೆ ಮಾಡಿಕೊಳ್ಳುವ ಜನರಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.</p>.<p>ಚಿಂತನ ಚಿಲುಮೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ, 1962ರ ಭಾರತ-ಚೀನಾ ಯುದ್ದಕ್ಕೆ ಸಂಬಂಧಿಸಿದಂತೆ ಯಡೂರ ಮಹಾಬಲ ರಚಿಸಿರುವ‘ಯುದ್ಧಪೂರ್ವ ಕಾಂಡ’ ಮತ್ತು ‘ಯುದ್ಧಕಾಂಡ’ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಭಯೋತ್ಪಾದನೆ ಹಾಗೂ ಯುದ್ಧೋತ್ಪಾದನೆಯನ್ನು ಎದುರಿಸುತ್ತಿ ದ್ದೇವೆ. ಬಂದೂಕು ಬಾಯಿ ಆಗಿರುವ ಹಾಗೂ ಬಾಯಿಯೇ ಬಂದೂಕಾಗಿರುವ ಭಯೋತ್ಪಾದನೆಗಳಿವೆ. ಬೃಹತ್ ರಾಷ್ಟ್ರಗಳಿಗೆ ಯುದ್ಧವೂ ಒಂದು ಉದ್ಯಮ’ ಎಂದರು.</p>.<p>ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಮಾತನಾಡಿ, ‘ಹಿಂದೆ ಸಾಮ್ರಾಜ್ಯ ವಿಸ್ತರಣೆ ಸಲುವಾಗಿ ರಾಜರು ಯುದ್ಧ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಇಂದು ಗಡಿ ವಿವಾದ ಹಾಗೂ ವ್ಯಾಪಾರಕ್ಕಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಬೇಡ ಎನ್ನುವವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ’ ಎಂದರು.</p>.<p>ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್,ಸಿಪಿಐ ಹಿರಿಯ ಮುಖಂಡಸಿದ್ಧನಗೌಡ ಪಾಟೀಲ, ಲೇಖಕ ಬಿ.ಆರ್.ಮಂಜುನಾಥ್, ರಾಜೇಂದ್ರ ಚೆನ್ನಿ, ಕೆ.ಎನ್. ಉಮೇಶ್ ಮತ್ತು ಪ್ರಕಾಶ್ ಕೃಷ್ಣಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನಾಥೂರಾಮ್ ಗೋಡ್ಸೆಯನ್ನೂ ದೇಶಭಕ್ತ ಎನ್ನುವ ಹಂತಕ್ಕೆ ದೇಶ ತಲುಪಿದೆ. ಗಾಂಧಿ ಹಾಗೂ ಗೋಡ್ಸೆ ನಡುವೆ, ಗೋಡ್ಸೆಯನ್ನು ಆಯ್ಕೆ ಮಾಡಿಕೊಳ್ಳುವ ಜನರಿದ್ದಾರೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.</p>.<p>ಚಿಂತನ ಚಿಲುಮೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ, 1962ರ ಭಾರತ-ಚೀನಾ ಯುದ್ದಕ್ಕೆ ಸಂಬಂಧಿಸಿದಂತೆ ಯಡೂರ ಮಹಾಬಲ ರಚಿಸಿರುವ‘ಯುದ್ಧಪೂರ್ವ ಕಾಂಡ’ ಮತ್ತು ‘ಯುದ್ಧಕಾಂಡ’ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಭಯೋತ್ಪಾದನೆ ಹಾಗೂ ಯುದ್ಧೋತ್ಪಾದನೆಯನ್ನು ಎದುರಿಸುತ್ತಿ ದ್ದೇವೆ. ಬಂದೂಕು ಬಾಯಿ ಆಗಿರುವ ಹಾಗೂ ಬಾಯಿಯೇ ಬಂದೂಕಾಗಿರುವ ಭಯೋತ್ಪಾದನೆಗಳಿವೆ. ಬೃಹತ್ ರಾಷ್ಟ್ರಗಳಿಗೆ ಯುದ್ಧವೂ ಒಂದು ಉದ್ಯಮ’ ಎಂದರು.</p>.<p>ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಮಾತನಾಡಿ, ‘ಹಿಂದೆ ಸಾಮ್ರಾಜ್ಯ ವಿಸ್ತರಣೆ ಸಲುವಾಗಿ ರಾಜರು ಯುದ್ಧ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಇಂದು ಗಡಿ ವಿವಾದ ಹಾಗೂ ವ್ಯಾಪಾರಕ್ಕಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಬೇಡ ಎನ್ನುವವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ’ ಎಂದರು.</p>.<p>ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್,ಸಿಪಿಐ ಹಿರಿಯ ಮುಖಂಡಸಿದ್ಧನಗೌಡ ಪಾಟೀಲ, ಲೇಖಕ ಬಿ.ಆರ್.ಮಂಜುನಾಥ್, ರಾಜೇಂದ್ರ ಚೆನ್ನಿ, ಕೆ.ಎನ್. ಉಮೇಶ್ ಮತ್ತು ಪ್ರಕಾಶ್ ಕೃಷ್ಣಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>