<p><strong>ಬೆಂಗಳೂರು</strong>: ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಲ್ದೀಪ್ ಕೆ. ರೈನಾ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ ಅವರು ‘ರಾಮಯ್ಯ ಸ್ಯಾಟ್’ ಹೆಸರಿನ ನ್ಯಾನೋ ಉಪಗ್ರಹ ಅಭಿವೃದ್ಧಿಪಡಿಸುವ ಒಡಂಬಡಿಕೆಗೆ ಸಹಿ ಹಾಕಿದರು. </p>.<p>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೇಲ್ವಿಚಾರಣೆ ಹಾಗೂ ಭಾರ ತೀಯ ತಂತ್ರಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ಸಹಾಯದಿಂದ ವಿದ್ಯಾರ್ಥಿಗಳು ನ್ಯಾನೋ ಉಪಗ್ರಹ ಅಭಿವೃದ್ಧಿ ಪಡಿಸುತ್ತಿದ್ದಾರೆ. ಒಂದು ಉಪಗ್ರಹದ ಅಭಿವೃದ್ಧಿಗೆ ₹ 1 ಕೋಟಿ ವೆಚ್ಚವಾಗಲಿದೆ.</p>.<p>ಪ್ರೊ.ಕುಲ್ದೀಪ್ ಕೆ. ರೈನಾ ಮಾತನಾಡಿ, ‘ಈ ಉಪಗ್ರಹ ನಿರ್ಮಾಣ ಕಾರ್ಯವು ನಮ್ಮ ಸಂಸ್ಥೆಗೆ ಗೌರವ ಮತ್ತು ಮನ್ನಣೆ ತರುವ ವಿಚಾರ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದು ಅವಕಾಶ’ ಎಂದರು.</p>.<p>‘ರಾಮಯ್ಯ ಸ್ಯಾಟ್’ ಉಪಗ್ರಹವು 300 ಗ್ರಾಂ ಪೇಲೋಡ್ ಹೊಂದಿದ್ದು, 1.6 ಕೆ.ಜಿ. ತೂಕ ಇರುತ್ತದೆ. ದೂರದ ಪ್ರದೇಶಗಳಿಗೆ ಸಂಪರ್ಕ ಸಂವಹನ ಜಾಲವನ್ನು ಒದಗಿಸಲು, ನೀರು ಮತ್ತು ಹವಾಮಾನದ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತದೆ. ಈ ಉಪಗ್ರಹದ ನಿಯಂತ್ರಣವನ್ನು ವಿಶ್ವವಿದ್ಯಾಲಯದ ಪೀಣ್ಯ ಆವರಣದಲ್ಲಿ ಸ್ಥಾಪಿಸಲಾಗುವುದು. ಆಗಸ್ಟ್ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಮುರಳಿಕೃಷ್ಣ ರೆಡ್ಡಿ ತಿಳಿಸಿದರು. ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಎಂ.ಆರ್.ಶ್ರೀನಿವಾಸ ಮೂರ್ತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಮಯ್ಯ ಆನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಲ್ದೀಪ್ ಕೆ. ರೈನಾ ಹಾಗೂ ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ ಅವರು ‘ರಾಮಯ್ಯ ಸ್ಯಾಟ್’ ಹೆಸರಿನ ನ್ಯಾನೋ ಉಪಗ್ರಹ ಅಭಿವೃದ್ಧಿಪಡಿಸುವ ಒಡಂಬಡಿಕೆಗೆ ಸಹಿ ಹಾಕಿದರು. </p>.<p>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮೇಲ್ವಿಚಾರಣೆ ಹಾಗೂ ಭಾರ ತೀಯ ತಂತ್ರಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ ಸಹಾಯದಿಂದ ವಿದ್ಯಾರ್ಥಿಗಳು ನ್ಯಾನೋ ಉಪಗ್ರಹ ಅಭಿವೃದ್ಧಿ ಪಡಿಸುತ್ತಿದ್ದಾರೆ. ಒಂದು ಉಪಗ್ರಹದ ಅಭಿವೃದ್ಧಿಗೆ ₹ 1 ಕೋಟಿ ವೆಚ್ಚವಾಗಲಿದೆ.</p>.<p>ಪ್ರೊ.ಕುಲ್ದೀಪ್ ಕೆ. ರೈನಾ ಮಾತನಾಡಿ, ‘ಈ ಉಪಗ್ರಹ ನಿರ್ಮಾಣ ಕಾರ್ಯವು ನಮ್ಮ ಸಂಸ್ಥೆಗೆ ಗೌರವ ಮತ್ತು ಮನ್ನಣೆ ತರುವ ವಿಚಾರ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದು ಅವಕಾಶ’ ಎಂದರು.</p>.<p>‘ರಾಮಯ್ಯ ಸ್ಯಾಟ್’ ಉಪಗ್ರಹವು 300 ಗ್ರಾಂ ಪೇಲೋಡ್ ಹೊಂದಿದ್ದು, 1.6 ಕೆ.ಜಿ. ತೂಕ ಇರುತ್ತದೆ. ದೂರದ ಪ್ರದೇಶಗಳಿಗೆ ಸಂಪರ್ಕ ಸಂವಹನ ಜಾಲವನ್ನು ಒದಗಿಸಲು, ನೀರು ಮತ್ತು ಹವಾಮಾನದ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತದೆ. ಈ ಉಪಗ್ರಹದ ನಿಯಂತ್ರಣವನ್ನು ವಿಶ್ವವಿದ್ಯಾಲಯದ ಪೀಣ್ಯ ಆವರಣದಲ್ಲಿ ಸ್ಥಾಪಿಸಲಾಗುವುದು. ಆಗಸ್ಟ್ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಮುರಳಿಕೃಷ್ಣ ರೆಡ್ಡಿ ತಿಳಿಸಿದರು. ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಎಂ.ಆರ್.ಶ್ರೀನಿವಾಸ ಮೂರ್ತಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>