‘ರಾಮಯ್ಯ ಸ್ಯಾಟ್’ ಉಪಗ್ರಹವು 300 ಗ್ರಾಂ ಪೇಲೋಡ್ ಹೊಂದಿದ್ದು, 1.6 ಕೆ.ಜಿ. ತೂಕ ಇರುತ್ತದೆ. ದೂರದ ಪ್ರದೇಶಗಳಿಗೆ ಸಂಪರ್ಕ ಸಂವಹನ ಜಾಲವನ್ನು ಒದಗಿಸಲು, ನೀರು ಮತ್ತು ಹವಾಮಾನದ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತದೆ. ಈ ಉಪಗ್ರಹದ ನಿಯಂತ್ರಣವನ್ನು ವಿಶ್ವವಿದ್ಯಾಲಯದ ಪೀಣ್ಯ ಆವರಣದಲ್ಲಿ ಸ್ಥಾಪಿಸಲಾಗುವುದು. ಆಗಸ್ಟ್ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಮುರಳಿಕೃಷ್ಣ ರೆಡ್ಡಿ ತಿಳಿಸಿದರು. ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಎಂ.ಆರ್.ಶ್ರೀನಿವಾಸ ಮೂರ್ತಿ ಹಾಜರಿದ್ದರು.