ಅಭಿಯಾನದ ಭಾಗವಾಗಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರದಲ್ಲಿ, ‘ಕೆರೆಯ ಮಧ್ಯೆ ಮೂರ್ತಿ ಸ್ಥಾಪನೆಯ ಅಕ್ರಮ ನಿರ್ಣಯವನ್ನು ಅಂಗೀಕರಿಸಿದ ಬಿಬಿಎಂಪಿ ಕೌನ್ಸಿಲ್ನ ನಿರ್ಧಾರವನ್ನು ತಿರಸ್ಕರಿಸಬೇಕು. ಹಾಗೆಯೇ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಈ ಅಕ್ರಮ ನಿರ್ಣಯಕ್ಕೆ ಮಾನ್ಯತೆ ನೀಡಿರುವುದನ್ನೂ ರದ್ದು ಮಾಡಿ, ಈ ವಿಚಾರ ಕುರಿತಂತೆ ಕ್ರಮ ಕೈಗೊಂಡು ನ್ಯಾಯಾಲಯದ ಗಮನಕ್ಕೆ ತರಬೇಕು’ ಎಂದು ಒತ್ತಾಯಿಸಲಾಗಿದೆ.