‘ಪೊಲೀಸರ ಕೆಲಸದ ಬಗ್ಗೆ ಕಮಿಷನರ್ ಅವರು ಪರಿಶೀಲನೆ ನಡೆಸುವುದು ಉತ್ತಮ ಬೆಳವಣಿಗೆ. ಆದರೆ, ಅವರ ಭೇಟಿ ದಿಢೀರ್ ಆಗಿರಬೇಕು. ಆಗ ಮಾತ್ರ ಪೊಲೀಸರ ತಪ್ಪುಗಳನ್ನು ಪತ್ತೆ ಮಾಡಿ, ಶಿಸ್ತುಕ್ರಮ ಜರುಗಿಸಬಹುದು. ಮೊದಲೇ ದಿನ ತಿಳಿಸಿ ಠಾಣೆಗೆ ಹೋದರೆ, ಪೊಲೀಸರಿಗೆ ಅನುಕೂಲ ಹೆಚ್ಚು’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.