ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತಾ ಸೌಲಭ್ಯ ಅಳವಡಿಕೆ ಅಗತ್ಯ: ರಾಘವೇಂದ್ರ ಔರಾದ್ಕರ್

Last Updated 22 ಜನವರಿ 2020, 22:49 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಂಕ್‌, ಆಭರಣ ಮಳಿಗೆ ಮತ್ತು ಬೃಹತ್‌ ಕಾರ್ಪೊರೇಟ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸುರಕ್ಷತಾ ಸೌಲಭ್ಯಗಳನ್ನು ಅಳವಡಿ ಸಿಕೊಳ್ಳುವ ಅಗತ್ಯ ಹೆಚ್ಚಿದೆ’ ಎಂದು ಕರ್ನಾಟಕ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.

ಬಸವನಗುಡಿಯ ಆರ್‌.ವಿ ರಸ್ತೆಯಲ್ಲಿ ಆರಂಭಗೊಂಡ ಗುನ್ನೆಬೊ ಇಂಡಿಯಾದ ‘ಎಕ್ಸಪೀರಿಯನ್ಸ್‌ ಸೆಂಟರ್‌’ ಉದ್ಘಾಟಿಸಿ ಅವರು ಮಾತನಾಡಿದರು. ‘ಕಂಪನಿ ತಯಾರಿಸುವ ಅತ್ಯಾಧುನಿಕ ಭದ್ರತಾ ಸೌಲಭ್ಯಗಳನ್ನು ಬ್ಯಾಂಕ್‌, ರಿಟೇಲ್‌ ಮಳಿಗೆ ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಅಳವಡಿಸಿಕೊಂಡರೆ ಸುರಕ್ಷತೆ ಹೆಚ್ಚಲಿದೆ. ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ’ ಎಂದರು.

ಬೆಲೆಬಾಳುವ ಸರಕುಗಳಿಗೆ ಸುರಕ್ಷತೆ ಒದಗಿಸುವ ಸೇವೆ, ತಂತ್ರಜ್ಞಾನ ಮತ್ತು ಪರಿಕರಗಳನ್ನು ಜಾಗತಿಕ ಕಂಪನಿ ಗುನ್ನೆಬೊ ಗ್ರೂಪ್‌ ಒದಗಿಸುತ್ತಿದೆ. ಈ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ ವಾಣಿಜ್ಯ ವಹಿವಾಟಿನ ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ನೆರವಾಗುವ ಅತ್ಯಾಧುನಿಕ ಪರಿಕರಗಳ ವಿಶಾಲ ಶ್ರೇಣಿ ಇದೆ.

‘ಕಂಪನಿಯು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಲಾಕರ್ ಮತ್ತು ಸ್ಪ್ರಾಂಗ್‌ರೂಂಗಳನ್ನು ತಯಾರಿಸಿ ಕೊಡುತ್ತದೆ’ ಎಂದು ಗುನ್ನೆಬೊ ಸೇಫ್ ಸ್ಟೊರೇಜ್‌ ನ ಉಪಾಧ್ಯಕ್ಷ ರಾಮ್ ಶ್ರೀನಿವಾಸನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT