‘ನಮ್ಮ ಮೆಟ್ರೊ ಕಾಮಗಾರಿ ಸಂದರ್ಭದಲ್ಲಿ ನೆಹರೂ ಅವರ ಪ್ರತಿಮೆಯನ್ನು ಮೂಲಸ್ಥಳದಿಂದ ಬೇರೆಗೆ ಸ್ಥಳಾಂತರಿಸಲಾಗಿತ್ತು. ಕಾಮಗಾರಿ ಮುಗಿದು ವರ್ಷಗಳೇ ಆಗಿವೆ. ಪ್ರತಿಮೆಯನ್ನು 2020ರ ನವೆಂಬರ್ 14ರೊಳಗೆ ಮೂಲಸ್ಥಳಕ್ಕೆ ಸ್ಥಳಾಂತರಿಸುವುದಾಗಿ ಕಳೆದ ಅಧಿವೇಶನದಲ್ಲಿಯೇ ಸರ್ಕಾರ ಹೇಳಿತ್ತು. ಈವರೆಗೆ ಆ ಕೆಲಸ ಆಗಿಲ್ಲ. ಸದನದಲ್ಲಿ ಕೊಟ್ಟ ಭರವಸೆ ಈಡೇರಿಸಿದೆ ಹಕ್ಕುಚ್ಯುತಿ ಉಂಟು ಮಾಡಲಾಗಿದೆ’ ಎಂದು ಅವರು ಆರೋಪಿಸಿದರು.