‘ಪ್ರತಿಷ್ಠಾನವಾಗಲೀ ಅಥವಾ ನಮ್ಮ ಕೋರಿಕೆಯನ್ನು ಬೆಂಬಲಿಸುತ್ತಿರುವ ಪರಿಸರ ಕಾರ್ಯಕರ್ತರಾಗಲೀ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಯೋಜನೆಗಾಗಿ ಇಷ್ಟೊಂದು ಸಂಖ್ಯೆಯಲ್ಲಿ ಮರಗಳನ್ನು ಬಲಿ ಕೊಡಬಾರದು ಎಂಬುದಷ್ಟೇ ನಮ್ಮ ಕಳಕಳಿ. 6,316 ಮರಗಳನ್ನು ಕಡಿದು, ಸಹಜವಾಗಿ ಅಭಿವೃದ್ಧಿಗೊಂಡ ವನ್ಯಜೀವಿ ಆವಾಸ ಸ್ಥಾನವನ್ನು ನಾಶ ಮಾಡಿ ಕೆರೆಯನ್ನು ಪುನರುಜ್ಜೀವನ ನಡೆಸುವ ಅನಿವಾರ್ಯ ನಿಜ್ಕೂ ಇದೆಯೇ ಎಂಬುದನ್ನು ಸಮಗ್ರವಾಗಿ ಮರುಪರಿಶೀಲನೆಗೆ ಒಳಪಡಿಸಬೇಕು. ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯ’ ಎಂದು ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ವಿನೋದ್ ಜೇಕಬ್ ತಿಳಿಸಿದರು.