ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಲಂ’ ಎನ್‌ಕೌಂಟರ್‌ನಿಂದ ನಡುಕ; ಶರಣಾದ ರೌಡಿಗಳು

Last Updated 6 ಮಾರ್ಚ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆ, ಸುಲಿಗೆ, ಕೊಲೆಯತ್ನ, ಜೀವ ಬೆದರಿಕೆ ಸೇರಿ 43ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ‘ಸ್ಲಂ’ ಭರತನನ್ನು ಉತ್ತರ ವಿಭಾಗದ ಪೊಲೀಸರು ಎನ್‌ಕೌಂಟರ್‌ ಮಾಡಿ ದಾಗಿನಿಂದ ನಗರದ ರೌಡಿಗಳಲ್ಲಿ ನಡುಕ ಶುರುವಾಗಿದೆ. ಪೊಲೀಸರು ತಮ್ಮ ಮೇಲೆಯೂ ಗುಂಡು ಹಾರಿಸಬಹುದೆಂಬ ಭಯದಲ್ಲಿ ಐವರು ರೌಡಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಸ್ಲಂ ಭರತನ ಸಹಚರನಾದ ’ಸ್ಲಂ‘ ಮಧು (23), ಎದುರಾಳಿ ಗ್ಯಾಂಗ್‌ನ ವಿನಯ್‌ಕುಮಾರ್ ಅಲಿಯಾಸ್ ಮಿಂಡಾ (25),ಮುನಿರಾಜ್ ಅಲಿ ಯಾಸ್ ಕರಿಯ (28),ಸತೀಶ್ ಅಲಿ ಯಾಸ್ ತುರೆ (25) ಹಾಗೂ ಅಜಯ್ ಅಲಿಯಾಸ್ ಗಜ್ಜಿ (19) ಶರಣಾದ ರೌಡಿಗಳು.

‘ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಭರತನನ್ನು ಇತ್ತೀಚೆಗೆ ಎನ್‌ಕೌಂಟರ್ ಮಾಡಲಾಗಿದೆ. ಇದಾದ ನಂತರ ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕುವ ಕೆಲಸ ನಡೆದಿದೆ. ಅದರ ನಡುವೆಯೇ ರೌಡಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ’ ಎಂದು ಉತ್ತರ ವಿಭಾ ಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಅಪರಾಧ ಕೃತ್ಯ ಎಸಗುವುದನ್ನೇ ವೃತ್ತಿ ಮಾಡಿ ಕೊಂಡಿದ್ದ ಸ್ಲಂ ಭರತ, ತನ್ನದೇ ಗ್ಯಾಂಗ್‌ ಕಟ್ಟಿ ಕೊಂಡಿದ್ದ. ಅದರ ಲ್ಲಿದ್ದ ಸ್ಲಂ ಮಧು, ಭರತನ ಜೊತೆ ಸೇರಿ ಹಲವು ಕೃತ್ಯ ಎಸಗಿದ್ದ. 5 ಪ್ರಕರಣಗಳಲ್ಲಿ ಆತನ ವಿರುದ್ಧ ಬಂಧನ ವಾರಂಟ್ ಜಾರಿ ಆಗಿತ್ತು. ಹಲವು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆತ, ಇದೇ 3ರಂದು 50ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ’ ಎಂದು ಹೇಳಿದರು.

‘ಭರತ ಹಾಗೂ ಆತನ ಸಹಚರರನ್ನು ಮುಗಿಸಲೆಂದೇ ವಿನಯ್‌ಕುಮಾರ್ ಅಲಿಯಾಸ್ ಮಿಂಡಾ ಮತ್ತೊಂದು ಗ್ಯಾಂಗ್‌ ಕಟ್ಟಿಕೊಂಡಿದ್ದ. ಮುನಿರಾಜ್, ಸತೀಶ್ ಹಾಗೂ ಅಜಯ್ ಅದೇ ಗ್ಯಾಂಗ್‌ ಸದಸ್ಯರು. ಅವರೆಲ್ಲರೂ 7ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿ ದ್ದಾರೆ. ಅವರ ವಿರುದ್ಧ ಹಲವು ಪ್ರಕರಣ ಗಳಿದ್ದು, ಅವುಗಳ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT