ಬಂಧಿತರನ್ನು ಕುರುಬರಹಳ್ಳಿಯ ಪ್ರೇಮ್ ಕುಮಾರ್ (29), ಸುನಿಲ್ (30), ಅಗ್ರಹಾರ ದಾಸರಹಳ್ಳಿಯ ವಿನೋದ್ (25) ಹಾಗೂ ಕಿರಣ್ (28) ಎಂದು ಗುರುತಿಸಲಾಗಿದೆ. ಈ ನಾಲ್ವರು ಕುರುಬರಹಳ್ಳಿ ಕೆಂಪೇಗೌಡ ಆಟದ ಮೈದಾನದ ಬಳಿ ಶೇಖರಗೌಡ ಎಂಬುವರ ಮೇಲೆ ಹಲ್ಲೆ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.