‘ರೇವಣ್ಣ ಅವರ ಕುಟುಂಬದ ಕಾರು ಚಾಲಕ ಕಾರ್ತಿಕ್ ನೀಡಿರುವ ಹೇಳಿಕೆಯಿಂದ ಪೆನ್ಡ್ರೈವ್ ಮೂಲ ಆತನೇ ಎನ್ನುವುದು ಸಾಬೀತಾಗಿದೆ. ಇಷ್ಟಾದರೂ ಅಶ್ಲೀಲ ವಿಡಿಯೊಗಳ ಪೆನ್ಡ್ರೈವ್ ಮಾಡಿದವರು, ಹಂಚಿದವರು ಯಾರು ಎಂಬ ಬಗ್ಗೆ ತನಿಖೆ ಚುರುಕುಗೊಳಿಸದಿರುವುದು ವಿಷಾದನೀಯ. ರೇವಣ್ಣ ಮತ್ತು ಪ್ರಜ್ವಲ್ ಅವರನ್ನು ವಿಚಾರಣೆಗೆ ಗುರಿಪಡಿಸಿ ಕ್ರಮ ಕೈಗೊಳ್ಳುವುದು ಎಷ್ಟು ಮುಖ್ಯವೋ, ಇದನ್ನು ಬೀದಿ ಬೀದಿಗಳಲ್ಲಿ ಹಂಚಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಅಷ್ಟೇ ಮುಖ್ಯ. ಹಾಗಾಗಿ, ಆಯೋಗವು ಹಾಸನ ಪೊಲೀಸ್ ಹಾಗೂ ಎಸ್.ಐ.ಟಿ.ಗೆ ಸ್ಪಷ್ಟ ಸೂಚನೆ ನೀಡಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.