<p><strong>ಬೆಂಗಳೂರು</strong>: ಚಲಿಸುವ ಮೆಟ್ರೊ ರೈಲಿಗೆ ಕೆಲವೆಡೆ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದು, ಇದನ್ನು ತಡೆಯಲು ತಡೆಗೋಡೆಗಳ ಎತ್ತರವನ್ನು ಇನ್ನಷ್ಟು ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಮುಂದಾಗಿದೆ.</p>.<p>ಎತ್ತರಿಸಿದ ರೈಲು ಮಾರ್ಗದಿಂದ ನೆಲದೊಳಗಿನ ಮಾರ್ಗಕ್ಕೆ ಇಳಿಯುವ ಜಾಗದಲ್ಲಿ ನೆಲ ಮಟ್ಟಕ್ಕೆ ರೈಲುಗಳ ಬರುತ್ತವೆ. ಅದೇ ಜಾಗದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ.ಸಂಪಿಗೆ ರಸ್ತೆ ಮತ್ತು ಮಾಗಡಿ ರಸ್ತೆಯಲ್ಲಿ ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಈ ರೀತಿಯ ಪ್ರಕರಣಗಳು ನಡೆದಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತಡೆಗೋಡೆಗಳ ಬಳಿಕಿಡಿಗೇಡಿಗಳು ಅವಿತು ಕುಳಿತು ಕಲ್ಲು ತೂರಿ ಪರಾರಿಯಾಗುತ್ತಿದ್ದಾರೆ. ಈ ರೀತಿ ನೆಲ ಮಟ್ಟಕ್ಕೆ ರೈಲು ಬರುವ ಜಾಗಕ್ಕೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ತಡೆಗೋಡೆಗಳನ್ನು ಎತ್ತರಿಸುವ ಕೆಲಸವನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದರು.</p>.<p>ಕಲ್ಲು ತೂರಿದಾಗ ಗಾಜುಗಳು ಪುಡಿಯಾಗಿ ರೈಲಿನೊಳಕ್ಕೆ ಕಲ್ಲು ಬಂದಿಲ್ಲ. ಗುಣಮಟ್ಟದ ಗಾಜುಗಳನ್ನು ಅಳವಡಿಸಿರುವುದರಿಂದ ಹೊರಭಾಗದಲ್ಲಿ ಸ್ವಲ್ಪ ಸೀಳು ಬಿಟ್ಟಿವೆ. ಟ್ರಿಪ್ ಮುಗಿಸಿ ಡಿಪೊಗೆ ಹೋದ ಕೂಡಲೇ ಗಾಜುಗಳನ್ನು ಬದಲಿಸಲಾಗುತ್ತಿದೆ ಎಂದು ವಿವರಿಸಿದರು.</p>.<p>ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈಗ ಕಿಡಿಗೇಡಿಗಳು ಕಲ್ಲು ತೂರಲು ಅವಕಾಶ ಇಲ್ಲ. ಪ್ರಯಾಣಿಕರು ಯಾವುದೇ ಆತಂಕ ಪಡಬೇಕಿಲ್ಲ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಚಲಿಸುವ ಮೆಟ್ರೊ ರೈಲಿಗೆ ಕೆಲವೆಡೆ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದು, ಇದನ್ನು ತಡೆಯಲು ತಡೆಗೋಡೆಗಳ ಎತ್ತರವನ್ನು ಇನ್ನಷ್ಟು ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಮುಂದಾಗಿದೆ.</p>.<p>ಎತ್ತರಿಸಿದ ರೈಲು ಮಾರ್ಗದಿಂದ ನೆಲದೊಳಗಿನ ಮಾರ್ಗಕ್ಕೆ ಇಳಿಯುವ ಜಾಗದಲ್ಲಿ ನೆಲ ಮಟ್ಟಕ್ಕೆ ರೈಲುಗಳ ಬರುತ್ತವೆ. ಅದೇ ಜಾಗದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ.ಸಂಪಿಗೆ ರಸ್ತೆ ಮತ್ತು ಮಾಗಡಿ ರಸ್ತೆಯಲ್ಲಿ ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಈ ರೀತಿಯ ಪ್ರಕರಣಗಳು ನಡೆದಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತಡೆಗೋಡೆಗಳ ಬಳಿಕಿಡಿಗೇಡಿಗಳು ಅವಿತು ಕುಳಿತು ಕಲ್ಲು ತೂರಿ ಪರಾರಿಯಾಗುತ್ತಿದ್ದಾರೆ. ಈ ರೀತಿ ನೆಲ ಮಟ್ಟಕ್ಕೆ ರೈಲು ಬರುವ ಜಾಗಕ್ಕೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ತಡೆಗೋಡೆಗಳನ್ನು ಎತ್ತರಿಸುವ ಕೆಲಸವನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದರು.</p>.<p>ಕಲ್ಲು ತೂರಿದಾಗ ಗಾಜುಗಳು ಪುಡಿಯಾಗಿ ರೈಲಿನೊಳಕ್ಕೆ ಕಲ್ಲು ಬಂದಿಲ್ಲ. ಗುಣಮಟ್ಟದ ಗಾಜುಗಳನ್ನು ಅಳವಡಿಸಿರುವುದರಿಂದ ಹೊರಭಾಗದಲ್ಲಿ ಸ್ವಲ್ಪ ಸೀಳು ಬಿಟ್ಟಿವೆ. ಟ್ರಿಪ್ ಮುಗಿಸಿ ಡಿಪೊಗೆ ಹೋದ ಕೂಡಲೇ ಗಾಜುಗಳನ್ನು ಬದಲಿಸಲಾಗುತ್ತಿದೆ ಎಂದು ವಿವರಿಸಿದರು.</p>.<p>ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈಗ ಕಿಡಿಗೇಡಿಗಳು ಕಲ್ಲು ತೂರಲು ಅವಕಾಶ ಇಲ್ಲ. ಪ್ರಯಾಣಿಕರು ಯಾವುದೇ ಆತಂಕ ಪಡಬೇಕಿಲ್ಲ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>