‘ರಾತ್ರಿ ಪಾಳಿಯಲ್ಲಿದ್ದ ಸ್ವಾಮಿಗೌಡ, ಕ್ಯಾಂಪಸ್ ಹಾಗೂ ಸುತ್ತಮುತ್ತ ಸಿಬ್ಬಂದಿಗಳ ಹಾಜರಿ ಪರಿಶೀಲಿಸುತ್ತಿದ್ದರು. ರಾತ್ರಿ 11.30ರ ಸುಮಾರಿಗೆ ಕ್ಯಾಂಪಸ್ನ ಪೂರ್ವ ಪ್ರವೇಶ ದ್ವಾರದ ಎದುರು ನಡೆದುಕೊಂಡು ಒಳಗೆ ಹೊರಟಿದ್ದರು. ಯಲಹಂಕ ಕಡೆಯಿಂದ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದಿದ್ದ ಅಮ್ಮರ್, ನಿಯಂತ್ರಣ ಕಳೆದುಕೊಂಡು ಸ್ವಾಮಿ ಅವರಿಗೆ ಗುದ್ದಿಸಿದ್ದರು.’