<p><strong>ಯಲಹಂಕ: </strong>ಜನಪದ ಕಲೆಗಳ ಅನಾವರಣ, ರಾಶಿಪೂಜೆ, ಆಹಾರ ಮೇಳ, ಕುರಿ-ಎತ್ತುಗಳ ಪ್ರದರ್ಶನ, ಚಿತ್ತಾರದ ರಂಗೋಲಿ, ಬಾನಂಗಣದಲ್ಲಿ ಹಾರಾಡಿದ ಗಾಳಿಪಟ, ಗ್ರಾಮೀಣ ಕ್ರೀಡೆಗಳು, ವಸ್ತು ಪ್ರದರ್ಶನ, ಎತ್ತಿನ ಬಂಡಿಯಲ್ಲಿ ಸವಾರಿ...</p>.<p>ಕಂದಾಯ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಂಕ್ರಾಂತಿ ‘ಸುಗ್ಗಿ-ಹುಗ್ಗಿʼ ಸಾಂಸ್ಕೃತಿಕ ಸಂಭ್ರಮ ಆಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.</p><p>ಕಬಡ್ಡಿ, ಹಗ್ಗ-ಜಗ್ಗಾಟ, ರಂಗೋಲಿ, ಮಡಕೆ ಹೊಡೆಯುವ ಹಾಗೂ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಬ್ಬಿನ ಜಲ್ಲೆ ಮತ್ತು ಭತ್ತದ ತೆನೆಯಿಂದ ನಿರ್ಮಿಸಿದ್ದ ಮನೆ ಹಾಗೂ ವಿವಿಧ ಆಕಾರದ ಬೆಲ್ಲದ ಹಚ್ಚುಗಳು ಆಕರ್ಷಕವಾಗಿದ್ದವು. 30ಕ್ಕೂ ಅಧಿಕ ತಂಡಗಳು ಜನಪದ ಪ್ರದರ್ಶನ ನೀಡಿದವು. ಸಾರ್ವಜನಿಕರಿಗೆ ಎಳ್ಳು-ಬೆಲ್ಲ, ಅವರೇಕಾಯಿ, ಕಬ್ಬು, ಗೆಣಸು ಹಾಗೂ ಸಿಹಿ-ಖಾರ ಪೊಂಗಲ್ ವಿತರಿಸಲಾಯಿತು.</p><p><strong>ವಸ್ತು ಪ್ರದರ್ಶನ:</strong> ಅವರೆಬೇಳೆ ಮೇಳ, ಗೃಹ ಉಪಯೋಗಿ ವಸ್ತುಗಳು, ಬಟ್ಟೆ, ಸಿರಿಧಾನ್ಯ, ಮಣ್ಣಿನ ಮಡಕೆ, ಪಿಒಪಿ ಬೊಂಬೆಗಳು, ಕೃತಕ ಆಭರಣಗಳು, ಸಿರಿಧಾನ್ಯಗಳು, ತಿಂಡಿ-ತಿನಿಸುಗಳು, ಸಾವಯವ ಪದಾರ್ಥಗಳು ಸೇರಿ ವೈವಿಧ್ಯಮಯ ಉತ್ಪನ್ನಗಳ 80ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸಾವಿರಾರು ಜನರು ತಮ್ಮ ಮಕ್ಕಳೊಂದಿಗೆ ಹಳ್ಳಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.</p><p>ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಭೂಮಿ-ಪ್ರಕೃತಿಯನ್ನು ಆರಾಧಿಸುವುದು ನಮ್ಮ ಮೂಲ ಸಂಸ್ಕೃತಿ ಹಾಗೂ ಜನಪದ ಕಲೆಗಳನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದಕ್ಕಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.</p><p>ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಕೃಷ್ಣ ಬೈರೇಗೌಡ, ಕಾಂಗ್ರೆಸ್ ಮುಖಂಡರಾದ ಎನ್.ಎನ್. ಶ್ರೀನಿವಾಸಯ್ಯ, ಎಂ. ಜಯಗೋಪಾಲಗೌಡ, ಎನ್.ಕೆ. ಮಹೇಶ್ಕುಮಾರ್, ಪಿ.ವಿ. ಮಂಜುನಾಥಬಾಬು, ವಿ.ವಿ.ಪಾರ್ತಿಬರಾಜನ್, ವಿ.ಹರಿ, ಆರ್.ಎಂ. ಶ್ರೀನಿವಾಸ್, ಎಚ್.ಎ. ಶಿವಕುಮಾರ್, ಕೆ. ಗೌರೀಶ್, ಪಿ. ರಾಹುಲ್, ಉತ್ತನ ಹಳ್ಳಿ ಜಯಕುಮಾರ್, ಹನುಮಂತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಜನಪದ ಕಲೆಗಳ ಅನಾವರಣ, ರಾಶಿಪೂಜೆ, ಆಹಾರ ಮೇಳ, ಕುರಿ-ಎತ್ತುಗಳ ಪ್ರದರ್ಶನ, ಚಿತ್ತಾರದ ರಂಗೋಲಿ, ಬಾನಂಗಣದಲ್ಲಿ ಹಾರಾಡಿದ ಗಾಳಿಪಟ, ಗ್ರಾಮೀಣ ಕ್ರೀಡೆಗಳು, ವಸ್ತು ಪ್ರದರ್ಶನ, ಎತ್ತಿನ ಬಂಡಿಯಲ್ಲಿ ಸವಾರಿ...</p>.<p>ಕಂದಾಯ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಂಕ್ರಾಂತಿ ‘ಸುಗ್ಗಿ-ಹುಗ್ಗಿʼ ಸಾಂಸ್ಕೃತಿಕ ಸಂಭ್ರಮ ಆಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು.</p><p>ಕಬಡ್ಡಿ, ಹಗ್ಗ-ಜಗ್ಗಾಟ, ರಂಗೋಲಿ, ಮಡಕೆ ಹೊಡೆಯುವ ಹಾಗೂ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಬ್ಬಿನ ಜಲ್ಲೆ ಮತ್ತು ಭತ್ತದ ತೆನೆಯಿಂದ ನಿರ್ಮಿಸಿದ್ದ ಮನೆ ಹಾಗೂ ವಿವಿಧ ಆಕಾರದ ಬೆಲ್ಲದ ಹಚ್ಚುಗಳು ಆಕರ್ಷಕವಾಗಿದ್ದವು. 30ಕ್ಕೂ ಅಧಿಕ ತಂಡಗಳು ಜನಪದ ಪ್ರದರ್ಶನ ನೀಡಿದವು. ಸಾರ್ವಜನಿಕರಿಗೆ ಎಳ್ಳು-ಬೆಲ್ಲ, ಅವರೇಕಾಯಿ, ಕಬ್ಬು, ಗೆಣಸು ಹಾಗೂ ಸಿಹಿ-ಖಾರ ಪೊಂಗಲ್ ವಿತರಿಸಲಾಯಿತು.</p><p><strong>ವಸ್ತು ಪ್ರದರ್ಶನ:</strong> ಅವರೆಬೇಳೆ ಮೇಳ, ಗೃಹ ಉಪಯೋಗಿ ವಸ್ತುಗಳು, ಬಟ್ಟೆ, ಸಿರಿಧಾನ್ಯ, ಮಣ್ಣಿನ ಮಡಕೆ, ಪಿಒಪಿ ಬೊಂಬೆಗಳು, ಕೃತಕ ಆಭರಣಗಳು, ಸಿರಿಧಾನ್ಯಗಳು, ತಿಂಡಿ-ತಿನಿಸುಗಳು, ಸಾವಯವ ಪದಾರ್ಥಗಳು ಸೇರಿ ವೈವಿಧ್ಯಮಯ ಉತ್ಪನ್ನಗಳ 80ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸಾವಿರಾರು ಜನರು ತಮ್ಮ ಮಕ್ಕಳೊಂದಿಗೆ ಹಳ್ಳಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.</p><p>ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಭೂಮಿ-ಪ್ರಕೃತಿಯನ್ನು ಆರಾಧಿಸುವುದು ನಮ್ಮ ಮೂಲ ಸಂಸ್ಕೃತಿ ಹಾಗೂ ಜನಪದ ಕಲೆಗಳನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದಕ್ಕಾಗಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.</p><p>ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಕೃಷ್ಣ ಬೈರೇಗೌಡ, ಕಾಂಗ್ರೆಸ್ ಮುಖಂಡರಾದ ಎನ್.ಎನ್. ಶ್ರೀನಿವಾಸಯ್ಯ, ಎಂ. ಜಯಗೋಪಾಲಗೌಡ, ಎನ್.ಕೆ. ಮಹೇಶ್ಕುಮಾರ್, ಪಿ.ವಿ. ಮಂಜುನಾಥಬಾಬು, ವಿ.ವಿ.ಪಾರ್ತಿಬರಾಜನ್, ವಿ.ಹರಿ, ಆರ್.ಎಂ. ಶ್ರೀನಿವಾಸ್, ಎಚ್.ಎ. ಶಿವಕುಮಾರ್, ಕೆ. ಗೌರೀಶ್, ಪಿ. ರಾಹುಲ್, ಉತ್ತನ ಹಳ್ಳಿ ಜಯಕುಮಾರ್, ಹನುಮಂತಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>