‘ದೂರುದಾರ ಮಹೇಶ್ಕುಮಾರ್ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೇರೆ ಊರಿಗೆ ಹೋಗಿದ್ದರು. ಬೀಗ ಹಾಕಿದ್ದ ಮನೆ ಗುರುತಿಸಿದ್ದ ಆರೋಪಿಗಳು, ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಬೀಗ ಮುರಿದು ಒಳನುಗ್ಗಿದ್ದ ಅವರಿಬ್ಬರು, 50 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿ ಸಾಮಗ್ರಿ ಹಾಗೂ ₹ 35,000 ನಗದು ಕದ್ದೊಯ್ದಿದ್ದರು’ ಎಂದು ತಿಳಿಸಿದರು.