‘ಟ್ರಕ್ ಚಾಲಕ ಶಿವಾಜಿ, ಕೋಲಾರ ದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನಹಣ್ಣುಗಳನ್ನು ತುಂಬಿಸಿಕೊಂಡು ಮಹಾರಾಷ್ಟ್ರದತ್ತ ಹೊರಟಿದ್ದರು. ನಾಗವಾರ ಮುಖ್ಯರಸ್ತೆ ಸಮೀಪದಲ್ಲಿ ಆಟೊದಲ್ಲಿ ಬಂದಿದ್ದ ಆರೋಪಿಗಳು, ಟ್ರಕ್ ಅಡ್ಡಗಟ್ಟಿದ್ದರು. ಚಾಕು ತೋರಿಸಿ ಶಿವಾಜಿ ಮೇಲೆ ಹಲ್ಲೆ ಮಾಡಿದ್ದರು. ಕೈ ಕಾಲು ಕಟ್ಟಿಹಾಕಿ ಹಣ ಹಾಗೂ ಮೊಬೈಲ್ ಕಿತ್ತುಕೊಂಡಿದ್ದರು. ನಂತರ, ಟ್ರಕ್ ಸಮೇತ ಪರಾರಿಯಾಗಿದ್ದರು.’ ‘ಕೈ ಮತ್ತು ಕಾಲಿಗೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡಿದ್ದ ಶಿವಾಜಿ, ಸ್ಥಳೀಯರೊಬ್ಬರ ನೆರವಿನಿಂದ ಠಾಣೆಗೆ ಬಂದು ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಆರೋಪಿಗಳು ಕೆ.ಆರ್.ಪುರ ಬಳಿ ಇರುವುದು ಗೊತ್ತಾಗಿತ್ತು. ಸ್ಥಳಕ್ಕೆ ಹೋಗಿ ಸಾದಿಕ್ನನ್ನು ಬಂಧಿಸ ಲಾಯಿತು. ಇನ್ನಿಬ್ಬರು ಪರಾರಿಯಾದರು’ ಎಂದೂ ಪೊಲೀಸರು ತಿಳಿಸಿದರು.