ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ–3 ಆಗಿದ್ದ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ಎಲಿಷ ಆ್ಯಂಡ್ರೂಸ್ ಅವರನ್ನು ರಾಜ್ಯ ಸರ್ಕಾರ ಏಪ್ರಿಲ್ 22ರಂದು ಅಮಾನತು ಮಾಡಿತ್ತು. ಕಡತ ವಿಲೇವಾರಿ ವೇಳೆ ವಿಳಂಬ ಧೋರಣೆ ಅನುಸರಿಸಿದ ಹಾಗೂ ಸರ್ಕಾರಿ ನೌಕರರ ತರವಲ್ಲದ ವರ್ತನೆ ತೋರಿದ ಆರೋಪವನ್ನು ಅವರು ಎದುರಿಸುತ್ತಿದ್ದರು. ಕಳೆದ ಒಂದು ತಿಂಗಳಿಂದ ಉಪ ಕಾರ್ಯದರ್ಶಿ ಹುದ್ದೆ ಖಾಲಿ ಇತ್ತು.