2020ರ ನವೆಂಬರ್ 28 ಮತ್ತು 29ರಂದು ಕ್ಲಬ್ಗೆ ಭೇಟಿ ನೀಡಿದ್ದ ಕ್ಯಾಪ್ಟನ್ ರವಿ ರಾಯದುರ್ಗ ನೇತೃತ್ವದ ತಂಡ, ‘ಶೇ 80ರಷ್ಟು ಅಶ್ವಶಾಲೆಗಳ ಪರಿಸ್ಥಿತಿ ಇದೇ ರೀತಿ ಇದೆ. ಹೊಸದಾಗಿ ಅಶ್ವಶಾಲೆಗಳನ್ನು ತೆರೆಯುವ ತುರ್ತು ಇದೆ’ ಎಂದು ವರದಿ ನೀಡಿದೆ. ಈ ಸಂಬಂಧ ನಿಲುವು ಸ್ಪಷ್ಟಪಡಿಸುವಂತೆ ಟರ್ಫ್ ಕ್ಲಬ್ ಮತ್ತು ಎಡಬ್ಲ್ಯುಬಿಐಗೆ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿತು.