ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ವ್ಯಾಪಾರಕ್ಕೆ ಒಪ್ಪಂದ

Last Updated 1 ಜನವರಿ 2021, 20:40 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದ ನಾಸಿಕ್ ಬಳಿಯ ರೈತ ಉತ್ಪಾದಕ ಸಂಸ್ಥೆ ಗಿರ್ನರ್‌ಖೋರ್‌ ಹಾಗೂ ಬೆಂಗಳೂರಿನ ಟಸ್ಕರ್ ಬೆರಿ ಅಗ್ರಿ ವೆಂಚರ್ಸ್‌ ನಡುವೆ ₹350 ಕೋಟಿ ಈರುಳ್ಳಿ ವ್ಯಾಪಾರದ ಒಪ್ಪಂದ ನಡೆದಿದೆ.

‘ರೈತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ತನ್ನ ದೇಶೀಯ ಕಾರ್ಯಾಚರಣೆಗಾಗಿ ಈರುಳ್ಳಿಯನ್ನು ಕೇಂದ್ರೀಕರಿಸಿದೆ. ಈ ಒಪ್ಪಂದದಿಂದ ಮೊದಲ ವರ್ಷದಲ್ಲಿ ₹350 ಕೋಟಿ ಈರುಳ್ಳಿ ವಹಿವಾಟಿಗೆ ಒಪ್ಪಂದ ನಡೆದಿದೆ. 2025ರ ವೇಳೆಗೆ ₹5 ಸಾವಿರ ಕೋಟಿ ವಹಿವಾಟು ಗುರಿ ಇದೆ’ ಎಂದುಟಸ್ಕರ್ ಬೆರಿ ನಿರ್ದೇಶಕ ಮಹಾಂತೇಶ್ ಎಂ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಸುಜಯ್ ಬೇಲೂರು,‘ಸಂಸ್ಥೆ ಈಗ ಉತ್ತರ ಕರ್ನಾಟಕ ಹಾಗೂ ನಾಸಿಕ್ ಈರುಳ್ಳಿ ಬೆಳೆಗಳ ಮೇಲೆ ಕೇಂದ್ರೀಕರಿಸಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಮ್ಮು–ಕಾಶ್ಮೀರದಲ್ಲಿ ಕಾರ್ಯಾಚರಣೆ ಆರಂಭಿಸಲು ಯೋಜನೆ ರೂಪಿಸಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT