‘ಮಂಗಳವಾರ ರಾತ್ರಿ 10.30ರ ಸುಮಾರಿಗೆ ರಾಮಚಂದ್ರಪುರ ಆಟದ ಮೈದಾನದಲ್ಲಿ ವೆಂಕಟೇಶ್ ಅವರು ವಾಕಿಂಗ್ ಮಾಡುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರು ಆರೋಪಿಗಳು ಬಿಯರ್ ಬಾಟಲಿ ಹಿಡಿದು ಮದ್ಯ ಸೇವಿಸುತ್ತಿದ್ದರು. ಇದನ್ನು ಕಂಡ ವೆಂಕಟೇಶ್, ‘ಇನ್ನೂ ನಿಮಗೆ ಚಿಕ್ಕ ವಯಸ್ಸು. ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಬುದ್ಧಿಮಾತು ಹೇಳಿದ್ದರು. ಈ ಮಾತು ಹೇಳಿದ್ದಕ್ಕೆ ಕುಪಿತರಾದ ಆರೋಪಿಗಳಿಬ್ಬರು, ವೆಂಕಟೇಶ್ ಜೊತೆಗೆ ಗಲಾಟೆ ಮಾಡಿದರು. ಅದಾದ ಮೇಲೆ ಚಾಕುವಿನಿಂದ ಹೊಟ್ಟೆಭಾಗಕ್ಕೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.