<p><strong>ಬೆಂಗಳೂರು</strong>: ಆಸ್ತಿ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ದಾಖಲೆ ಬರೆದಿದ್ದು, 28 ದಿನಗಳಲ್ಲಿ ₹1 ಸಾವಿರ ಕೋಟಿ ಮತ್ತು ಕಳೆದ ಎರಡು ತಿಂಗಳಲ್ಲಿ ₹2 ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದೆ.</p>.<p>ತೆರಿಗೆ ಸಂಗ್ರಹ ವಿಚಾರದಲ್ಲಿ ತೆಗೆದುಕೊಂಡ ಸಣ್ಣ–ಸಣ್ಣ ಸುಧಾರಣಾ ಕ್ರಮಗಳಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ) ಆರ್.ಎಲ್. ದೀಪಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ತೆರಿಗೆ ಪಾವತಿಸಲು ವಲಯ ಆಯ್ಕೆ ಮಾಡುವ ಪದ್ಧತಿಯನ್ನು ಸರಳಗೊಳಿಸಲಾಗಿದೆ. ಖಾಲಿ ನಿವೇಶನ ಎಂದು ಬಿಬಿಎಂಪಿಗೆ ಮಾಹಿತಿ ನೀಡಿ ತೆರಿಗೆ ವಂಚಿಸುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಸಂಪರ್ಕ ಪಡೆದಿರುವ ಬಗ್ಗೆ ಬೆಸ್ಕಾಂನಿಂದ ಮಾಹಿತಿ ಪಡೆದು ಎರಡೂ ದಾಖಲೆಗಳನ್ನು ತಾಳೆ ಮಾಡಿ ಪರಿಶೀಲಿಸಲಾಗುತ್ತಿದೆ. ಕಟ್ಟಡ ವಾಣಿಜ್ಯ ಬಳಕೆಯೋ, ಗೃಹ ಬಳಕೆಯೋ ಎಂಬುದು ಗೊತ್ತಾಗುತ್ತಿದೆ. ತೆರಿಗೆ ವಸೂಲಿ ಸುಲಭವಾಗುತ್ತಿದೆ’ ಎಂದರು.</p>.<p>‘ಡ್ರೋನ್ ಬಳಸಿಯೂ ಖಾಲಿ ನಿವೇಶನವಿದೆಯೋ, ಕಟ್ಟಡ ನಿರ್ಮಾಣ ಆಗಿದೆಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಯಲಹಂಕ ವಲಯದಲ್ಲಿ ಪ್ರಯೋಗಿಕವಾಗಿ ಡ್ರೋನ್ ಬಳಸಿ ಸರ್ವೆ ಮಾಡಲಾಗಿದೆ. ಅದರ ಬಳಿಕವೂ ಅಧಿಕಾರಿಗಳು ಕಟ್ಟಡಗಳನ್ನು ಖುದ್ದು ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆಸ್ತಿ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ದಾಖಲೆ ಬರೆದಿದ್ದು, 28 ದಿನಗಳಲ್ಲಿ ₹1 ಸಾವಿರ ಕೋಟಿ ಮತ್ತು ಕಳೆದ ಎರಡು ತಿಂಗಳಲ್ಲಿ ₹2 ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದೆ.</p>.<p>ತೆರಿಗೆ ಸಂಗ್ರಹ ವಿಚಾರದಲ್ಲಿ ತೆಗೆದುಕೊಂಡ ಸಣ್ಣ–ಸಣ್ಣ ಸುಧಾರಣಾ ಕ್ರಮಗಳಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ) ಆರ್.ಎಲ್. ದೀಪಕ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ತೆರಿಗೆ ಪಾವತಿಸಲು ವಲಯ ಆಯ್ಕೆ ಮಾಡುವ ಪದ್ಧತಿಯನ್ನು ಸರಳಗೊಳಿಸಲಾಗಿದೆ. ಖಾಲಿ ನಿವೇಶನ ಎಂದು ಬಿಬಿಎಂಪಿಗೆ ಮಾಹಿತಿ ನೀಡಿ ತೆರಿಗೆ ವಂಚಿಸುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಸಂಪರ್ಕ ಪಡೆದಿರುವ ಬಗ್ಗೆ ಬೆಸ್ಕಾಂನಿಂದ ಮಾಹಿತಿ ಪಡೆದು ಎರಡೂ ದಾಖಲೆಗಳನ್ನು ತಾಳೆ ಮಾಡಿ ಪರಿಶೀಲಿಸಲಾಗುತ್ತಿದೆ. ಕಟ್ಟಡ ವಾಣಿಜ್ಯ ಬಳಕೆಯೋ, ಗೃಹ ಬಳಕೆಯೋ ಎಂಬುದು ಗೊತ್ತಾಗುತ್ತಿದೆ. ತೆರಿಗೆ ವಸೂಲಿ ಸುಲಭವಾಗುತ್ತಿದೆ’ ಎಂದರು.</p>.<p>‘ಡ್ರೋನ್ ಬಳಸಿಯೂ ಖಾಲಿ ನಿವೇಶನವಿದೆಯೋ, ಕಟ್ಟಡ ನಿರ್ಮಾಣ ಆಗಿದೆಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಯಲಹಂಕ ವಲಯದಲ್ಲಿ ಪ್ರಯೋಗಿಕವಾಗಿ ಡ್ರೋನ್ ಬಳಸಿ ಸರ್ವೆ ಮಾಡಲಾಗಿದೆ. ಅದರ ಬಳಿಕವೂ ಅಧಿಕಾರಿಗಳು ಕಟ್ಟಡಗಳನ್ನು ಖುದ್ದು ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>