‘ಇದಕ್ಕಾಗಿ, ಜನ ಸಮುದಾಯಗಳ ಪ್ರಜ್ಞೆಯ ಆಳದಲ್ಲಿ ಮಲಗಿದ್ದ ಸರ್ಪವನ್ನು ಹಿಂದೆಂದೂ ಇಲ್ಲದಂತೆ ತಿವಿದು, ಕೆರಳಿಸಿ, ಕ್ರುದ್ಧಗೊಳಿಸಲಾಗಿದೆ. ತಾವು ಹಾಕಿದ ಗೆರೆಯನ್ನು ದಾಟುವ ಆದಿವಾಸಿಗಳು, ಅಲ್ಪಸಂಖ್ಯಾತರು, ದಲಿತರು ಹಾಗೂ ಮಾನವಹಕ್ಕುಗಳ ಹೋರಾಟಗಾರರನ್ನು ಸರ್ಪಕ್ಕೆ ಬಲಿ ನೀಡಲಾಗುತ್ತಿದೆ. ಹೂತ್ಕರಿಸಿರುವ ಉರಗ ಸದ್ಯಕ್ಕೆ ಸುಮ್ಮನಾಗುವ ಸೂಚನೆಗಳು ಕಾಣಿಸುತ್ತಿಲ್ಲ. ಜನಸಮುದಾಯದ ಮೈ ಮನಸ್ಸಿಗೆ ತಗುಲಿದ ವ್ಯಾಧಿ ಅಷ್ಟೇ ತ್ವರಿತವಾಗಿ ಗುಣವಾಗುವುದು ಕಷ್ಟ’ ಎಂದು ಅವರು ಹೇಳಿದರು.