<p><strong>ಬೆಂಗಳೂರು:</strong> ‘ಮೋದಿ ಸರ್ಕಾರದ ವಿರೋಧಿ ನೀತಿಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಶ್ರಮಿಕ ವರ್ಗಗಳಾದ ಕೈಗಾರಿಕಾ ಮತ್ತು ಕೃಷಿ ಕಾರ್ಮಿಕರಲ್ಲಿ ಐಕ್ಯತೆ ಮೂಡಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎಂ.ಎ.ಬೇಬಿ ಅಭಿಪ್ರಾಯಪಟ್ಟರು.</p>.<p>ಜನಶಕ್ತಿ ಪ್ರಕಾಶನವು ಆನ್ಲೈನ್ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಹೋರಾಟಗಳ ನೂರು ವರುಷಗಳು’ ಹಾಗೂ ‘ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೆಲವೇ ದಿನಗಳಲ್ಲಿ ರೈತರ ಚಳವಳಿ 365 ದಿನಗಳನ್ನು ಪೂರ್ಣಗೊಳಿಸಲಿದೆ. ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರಲ್ಲಿ ಐಕ್ಯತೆ ಮೂಡಿರುವುದು ಉತ್ತಮ ಬೆಳವಣಿಗೆ. ದೇಶದಲ್ಲಿ ಆರ್ಥಿಕ ನೀತಿಗಳ ಮುಖಾಂತರ ದಾಳಿಗಳು ನಡೆಯುತ್ತಿದ್ದು, ಶ್ರಮಿಕ ವರ್ಗಗಳು ಒಗ್ಗೂಡಿ ಇವುಗಳನ್ನು ವಿರೋಧಿಸಬೇಕು’ ಎಂದರು.</p>.<p>‘ದೇಶದಲ್ಲಿ ಕೋಮುವಾದಿ ಶಕ್ತಿಗಳು ತೀವ್ರಗೊಳ್ಳುತ್ತಿದ್ದು, ಜನರ ಎಲ್ಲ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಚಳವಳಿಗೆ ದಾರಿ ತೋರಲು ಹಾಗೂ ಇತಿಹಾಸದ ಚಳವಳಿಗಳನ್ನು ನೆನಪಿಸಲು ಈ ಪುಸ್ತಕಗಳು ಪೂರಕವಾಗಿವೆ’ ಎಂದು ಹೇಳಿದರು.</p>.<p>ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್,‘ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷ ಪುಸ್ತಕವು ಅಂದಿನ ಹೋರಾಟವನ್ನು ವಿಶ್ಲೇಷಿಸುತ್ತಾ ಸಾಗುವುದರಿಂದ ಭವಿಷ್ಯದಲ್ಲಿ ಚಳವಳಿ ಆರಂಭಿಸುವವರಿಗೆ, ಸಮ–ಸಮಾಜ ನಿರ್ಮಾಣದ ತುಡಿತ ಇರುವವರಿಗೆ ಪ್ರೇರಣೆಯಾಗಲಿದೆ’ ಎಂದರು.</p>.<p>ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಟಿ.ಸುರೇಂದ್ರರಾವ್,ಗುರುರಾಜ್ ದೇಸಾಯಿ, ಎನ್.ಕೆ.ವಸಂತ ರಾಜ್ಹಾಗೂ ಇತರರು ಭಾಗವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮೋದಿ ಸರ್ಕಾರದ ವಿರೋಧಿ ನೀತಿಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಶ್ರಮಿಕ ವರ್ಗಗಳಾದ ಕೈಗಾರಿಕಾ ಮತ್ತು ಕೃಷಿ ಕಾರ್ಮಿಕರಲ್ಲಿ ಐಕ್ಯತೆ ಮೂಡಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎಂ.ಎ.ಬೇಬಿ ಅಭಿಪ್ರಾಯಪಟ್ಟರು.</p>.<p>ಜನಶಕ್ತಿ ಪ್ರಕಾಶನವು ಆನ್ಲೈನ್ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಹೋರಾಟಗಳ ನೂರು ವರುಷಗಳು’ ಹಾಗೂ ‘ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೆಲವೇ ದಿನಗಳಲ್ಲಿ ರೈತರ ಚಳವಳಿ 365 ದಿನಗಳನ್ನು ಪೂರ್ಣಗೊಳಿಸಲಿದೆ. ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರಲ್ಲಿ ಐಕ್ಯತೆ ಮೂಡಿರುವುದು ಉತ್ತಮ ಬೆಳವಣಿಗೆ. ದೇಶದಲ್ಲಿ ಆರ್ಥಿಕ ನೀತಿಗಳ ಮುಖಾಂತರ ದಾಳಿಗಳು ನಡೆಯುತ್ತಿದ್ದು, ಶ್ರಮಿಕ ವರ್ಗಗಳು ಒಗ್ಗೂಡಿ ಇವುಗಳನ್ನು ವಿರೋಧಿಸಬೇಕು’ ಎಂದರು.</p>.<p>‘ದೇಶದಲ್ಲಿ ಕೋಮುವಾದಿ ಶಕ್ತಿಗಳು ತೀವ್ರಗೊಳ್ಳುತ್ತಿದ್ದು, ಜನರ ಎಲ್ಲ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಚಳವಳಿಗೆ ದಾರಿ ತೋರಲು ಹಾಗೂ ಇತಿಹಾಸದ ಚಳವಳಿಗಳನ್ನು ನೆನಪಿಸಲು ಈ ಪುಸ್ತಕಗಳು ಪೂರಕವಾಗಿವೆ’ ಎಂದು ಹೇಳಿದರು.</p>.<p>ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್,‘ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷ ಪುಸ್ತಕವು ಅಂದಿನ ಹೋರಾಟವನ್ನು ವಿಶ್ಲೇಷಿಸುತ್ತಾ ಸಾಗುವುದರಿಂದ ಭವಿಷ್ಯದಲ್ಲಿ ಚಳವಳಿ ಆರಂಭಿಸುವವರಿಗೆ, ಸಮ–ಸಮಾಜ ನಿರ್ಮಾಣದ ತುಡಿತ ಇರುವವರಿಗೆ ಪ್ರೇರಣೆಯಾಗಲಿದೆ’ ಎಂದರು.</p>.<p>ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಟಿ.ಸುರೇಂದ್ರರಾವ್,ಗುರುರಾಜ್ ದೇಸಾಯಿ, ಎನ್.ಕೆ.ವಸಂತ ರಾಜ್ಹಾಗೂ ಇತರರು ಭಾಗವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>