<p><strong>ಬೆಂಗಳೂರು</strong>: ‘ನಗರದಲ್ಲಿ ಖಾಸಗಿ ವಾಹನಗಳು ಅಧಿಕವಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚು ಬಳಸಿದರೆ ಸಮಸ್ಯೆ ಸಾಕಷ್ಟು ನಿವಾರಣೆಯಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.</p>.<p>ಐಎನ್ಎಚ್ಎಎಫ್– ಹ್ಯಾಬಿ ಟ್ಯಾಟ್ ಫೋರಂ ಆಯೋಜಿಸಿದ್ದ ‘21ನೇ ಶತಮಾನದಲ್ಲಿ ನಗರಗಳ ಅಭಿವೃದ್ಧಿ’ ವೆಬಿನಾರ್ನಲ್ಲಿ ಅವರು ಮಾತನಾಡಿದರು.</p>.<p>‘ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಸಾಕಷ್ಟು ಮೂಲಸೌಕರ್ಯಗಳ ಕೊರತೆಯನ್ನೂ ಎದುರಿಸಲಾಗುತ್ತಿದೆ. ಯೋಜನಾತ್ಮಕವಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದಿನ 20 ವರ್ಷ ನಗರ ಬೆಳೆಯುತ್ತಲೇ ಹೋಗುತ್ತದೆ. ಮುಂದುವರಿದ ನಗರವನ್ನು ಅರೆ ನಗರವನ್ನಾಗಿ ರೂಪಿಸಬೇಕಾಗಿದೆ. ಸೌಲಭ್ಯ ಅಥವಾ ಸೇವೆಗಳನ್ನು ವಿಕೇಂದ್ರೀಕರಣ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯಗತವಾಗಿದೆ’ ಎಂದರು.</p>.<p>‘ನಗರದಲ್ಲಿ ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯದ ಸಮಸ್ಯೆ ಬಗ್ಗೆ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನಾವು ನಿಯಂತ್ರಿಸಲು ಸಾಕಷ್ಟು ವಿಕೇಂದ್ರೀಕೃತ ಸೌಲಭ್ಯಗಳನ್ನು ಸ್ಥಾಪಿಸುತ್ತಿದ್ದೇವೆ. ವಾರ್ಡ್ವಾರು ತ್ಯಾಜ್ಯ ಸಂಸ್ಕರಣೆ ಇದರಲ್ಲಿ ಒಂದಾಗಿದೆ’ ಎಂದು ಹೇಳಿದರು.</p>.<p>‘ನಗರಗಳ ಬೆಳವಣಿಗೆಯಲ್ಲಿ ‘ಮಾಸ್ಟರ್ ಪ್ಲಾನ್’ ರೂಪಿಸುವಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿವೆ. ಯೋಜನೆಯಂತೆ ಅಭಿವೃದ್ಧಿಯಾಗದಿರುವುದು ಸಮಸ್ಯೆಗಳು ಹೆಚ್ಚಾಗಲು ಕಾರಣ’ ಎಂದು ಸಿಎನ್ಟಿ ಆರ್ಕಿಟೆಕ್ಟ್ಸ್ನ ವ್ಯವಸ್ಥಾಪಕ ಪಾಲುದಾರ ಪ್ರೇಮ್ ಚಂದಾವರ್ಕರ್ ಹೇಳಿದರು.</p>.<p>‘ವಸತಿಗಾಗಿ ನೈಸರ್ಗಿಕ ಪ್ರದೇಶಗಳಾದ ಕೆರೆಯಂತಹ ಸ್ಥಳಗಳನ್ನು ಉಪಯೋಗಿಸಿಕೊಳ್ಳುವ ಸಂದರ್ಭ ಬಾರದಂತೆ ಯೋಜನೆ ರೂಪಿಸುವುದು ನಗರಗಳಲ್ಲಿ ಅತ್ಯಗತ್ಯವಾಗಿದೆ’ ಎಂದು ಅಮೆರಿಕದವಾಸ್ತುಶಿಲ್ಪಿ ಕ್ಯಾತೆ ದೊರ್ಗಾನ್ ಅಭಿಪ್ರಾಯಪಟ್ಟರು.</p>.<p>ನಗರದ ಸುಬ್ರಹ್ಮಣ್ಯಪುರ ವರ್ಷ ಕಳೆದಂತೆ ಹೇಗೆ ಬದಲಾಯಿತು, ಅಲ್ಲಿನ ಕೆರೆಯ ಪ್ರದೇಶದಲ್ಲಿ ಬಂದು ವಾಸ ಮಾಡುವವರನ್ನು ತೆರವುಗೊಳಿಸುವುದು ಎಷ್ಟು ಕಷ್ಟವಾಗುತ್ತಿದೆ, ಇದಕ್ಕಾಗಿ ನ್ಯಾಯಾಲಯದಲ್ಲಿನ ಹೋರಾಟ ಹೇಗೆ ನಡೆಯುತ್ತಿದೆ ಎಂಬುದನ್ನು ವಕೀಲ ಲಿಯೊ ಸಲ್ಡಾನಾ ವಿವರಿಸಿದರು.</p>.<p>‘ರಾಜಕಾಲುವೆ ನಿರ್ವಹಣೆ ಯೋಜನೆಯಲ್ಲಿ ಸಾಕಷ್ಟು ಕೊರತೆ ಇದೆ. ಇವುಗಳ ನಿರ್ವಹಣೆಯಿಂದ ಮಳೆಗಾಲದಲ್ಲಿ ಸಮಸ್ಯೆಗಳೇ ಹೆಚ್ಚಾಗುತ್ತಿವೆ’ ಎಂದು ವಿಎ ಗ್ರೂಪ್ನ ಪ್ರಧಾನ ಆರ್ಕಿಟೆಕ್ಟ್ ನರೇಶ್ ನರಸಿಂಹನ್ ಹೇಳಿದರು.</p>.<p>ಇಎಸ್ಜಿ ಟ್ರಸ್ಟಿ ಭಾರ್ಗವಿ ರಾವ್ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಗರದಲ್ಲಿ ಖಾಸಗಿ ವಾಹನಗಳು ಅಧಿಕವಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚು ಬಳಸಿದರೆ ಸಮಸ್ಯೆ ಸಾಕಷ್ಟು ನಿವಾರಣೆಯಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.</p>.<p>ಐಎನ್ಎಚ್ಎಎಫ್– ಹ್ಯಾಬಿ ಟ್ಯಾಟ್ ಫೋರಂ ಆಯೋಜಿಸಿದ್ದ ‘21ನೇ ಶತಮಾನದಲ್ಲಿ ನಗರಗಳ ಅಭಿವೃದ್ಧಿ’ ವೆಬಿನಾರ್ನಲ್ಲಿ ಅವರು ಮಾತನಾಡಿದರು.</p>.<p>‘ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಸಾಕಷ್ಟು ಮೂಲಸೌಕರ್ಯಗಳ ಕೊರತೆಯನ್ನೂ ಎದುರಿಸಲಾಗುತ್ತಿದೆ. ಯೋಜನಾತ್ಮಕವಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮುಂದಿನ 20 ವರ್ಷ ನಗರ ಬೆಳೆಯುತ್ತಲೇ ಹೋಗುತ್ತದೆ. ಮುಂದುವರಿದ ನಗರವನ್ನು ಅರೆ ನಗರವನ್ನಾಗಿ ರೂಪಿಸಬೇಕಾಗಿದೆ. ಸೌಲಭ್ಯ ಅಥವಾ ಸೇವೆಗಳನ್ನು ವಿಕೇಂದ್ರೀಕರಣ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯಗತವಾಗಿದೆ’ ಎಂದರು.</p>.<p>‘ನಗರದಲ್ಲಿ ಘನತ್ಯಾಜ್ಯ ಹಾಗೂ ದ್ರವತ್ಯಾಜ್ಯದ ಸಮಸ್ಯೆ ಬಗ್ಗೆ ಸಾಕಷ್ಟು ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನಾವು ನಿಯಂತ್ರಿಸಲು ಸಾಕಷ್ಟು ವಿಕೇಂದ್ರೀಕೃತ ಸೌಲಭ್ಯಗಳನ್ನು ಸ್ಥಾಪಿಸುತ್ತಿದ್ದೇವೆ. ವಾರ್ಡ್ವಾರು ತ್ಯಾಜ್ಯ ಸಂಸ್ಕರಣೆ ಇದರಲ್ಲಿ ಒಂದಾಗಿದೆ’ ಎಂದು ಹೇಳಿದರು.</p>.<p>‘ನಗರಗಳ ಬೆಳವಣಿಗೆಯಲ್ಲಿ ‘ಮಾಸ್ಟರ್ ಪ್ಲಾನ್’ ರೂಪಿಸುವಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿವೆ. ಯೋಜನೆಯಂತೆ ಅಭಿವೃದ್ಧಿಯಾಗದಿರುವುದು ಸಮಸ್ಯೆಗಳು ಹೆಚ್ಚಾಗಲು ಕಾರಣ’ ಎಂದು ಸಿಎನ್ಟಿ ಆರ್ಕಿಟೆಕ್ಟ್ಸ್ನ ವ್ಯವಸ್ಥಾಪಕ ಪಾಲುದಾರ ಪ್ರೇಮ್ ಚಂದಾವರ್ಕರ್ ಹೇಳಿದರು.</p>.<p>‘ವಸತಿಗಾಗಿ ನೈಸರ್ಗಿಕ ಪ್ರದೇಶಗಳಾದ ಕೆರೆಯಂತಹ ಸ್ಥಳಗಳನ್ನು ಉಪಯೋಗಿಸಿಕೊಳ್ಳುವ ಸಂದರ್ಭ ಬಾರದಂತೆ ಯೋಜನೆ ರೂಪಿಸುವುದು ನಗರಗಳಲ್ಲಿ ಅತ್ಯಗತ್ಯವಾಗಿದೆ’ ಎಂದು ಅಮೆರಿಕದವಾಸ್ತುಶಿಲ್ಪಿ ಕ್ಯಾತೆ ದೊರ್ಗಾನ್ ಅಭಿಪ್ರಾಯಪಟ್ಟರು.</p>.<p>ನಗರದ ಸುಬ್ರಹ್ಮಣ್ಯಪುರ ವರ್ಷ ಕಳೆದಂತೆ ಹೇಗೆ ಬದಲಾಯಿತು, ಅಲ್ಲಿನ ಕೆರೆಯ ಪ್ರದೇಶದಲ್ಲಿ ಬಂದು ವಾಸ ಮಾಡುವವರನ್ನು ತೆರವುಗೊಳಿಸುವುದು ಎಷ್ಟು ಕಷ್ಟವಾಗುತ್ತಿದೆ, ಇದಕ್ಕಾಗಿ ನ್ಯಾಯಾಲಯದಲ್ಲಿನ ಹೋರಾಟ ಹೇಗೆ ನಡೆಯುತ್ತಿದೆ ಎಂಬುದನ್ನು ವಕೀಲ ಲಿಯೊ ಸಲ್ಡಾನಾ ವಿವರಿಸಿದರು.</p>.<p>‘ರಾಜಕಾಲುವೆ ನಿರ್ವಹಣೆ ಯೋಜನೆಯಲ್ಲಿ ಸಾಕಷ್ಟು ಕೊರತೆ ಇದೆ. ಇವುಗಳ ನಿರ್ವಹಣೆಯಿಂದ ಮಳೆಗಾಲದಲ್ಲಿ ಸಮಸ್ಯೆಗಳೇ ಹೆಚ್ಚಾಗುತ್ತಿವೆ’ ಎಂದು ವಿಎ ಗ್ರೂಪ್ನ ಪ್ರಧಾನ ಆರ್ಕಿಟೆಕ್ಟ್ ನರೇಶ್ ನರಸಿಂಹನ್ ಹೇಳಿದರು.</p>.<p>ಇಎಸ್ಜಿ ಟ್ರಸ್ಟಿ ಭಾರ್ಗವಿ ರಾವ್ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>