<p><strong>ಬೆಂಗಳೂರು</strong>: ‘ದೇವರಿದ್ದಾನೋ ಇಲ್ಲವೋ ಎಂಬ ಚಿಂತೆಯೂ ಸೇರಿದಂತೆ ಹತ್ತಾರು ಚಿಂತೆಗಳೆಂಬ ಚಿತೆಯಲ್ಲಿ ವಚನಗಳು ಪರಿಹಾರವಾಗಿವೆ’ ಎಂದು ಸಂಸ್ಕೃತಿ ಚಿಂತಕ ಎಸ್. ಷಡಕ್ಷರಿ ಹೇಳಿದರು.</p>.<p>ವಿಜಯನಗರದ ಡಾ. ಮುನಿರಾಜಪ್ಪನವರ ‘ಹೊಂಬೆಳಕು‘ನಲ್ಲಿ ನಡೆದ ವಚನಜ್ಯೋತಿ ಬಳಗದ ವಚನ ಶ್ರಾವಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉಪನ್ಯಾಸಕಿಯಾಗಿ ಮಾತನಾಡಿದ 5ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಹಣ್ಣಿ, ‘ವಚನವೆಂದರೆ ಬರಿ ಮಾತಲ್ಲ, ಅದು ಪ್ರಮಾಣ. ನಡೆಯೊಳಗೆ ನುಡಿಯ ಪೂರೈಸುವುದೇ ವಚನ’ ಎಂದು ವಿವರಿಸಿದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ‘ಹೆಚ್ಚುತ್ತಿರುವ ಮೌಢ್ಯಾಚರಣೆಗಳ ಕುರಿತು ಅರಿವು ಮೂಡಿಸಿ ಸರಳ ಶುದ್ದ ಬದುಕನ್ನು ರೂಢಿಸಿಕೊಳ್ಳಬೇಕೆಂಬ ಬಸವಾದಿ ಪ್ರಮಥರ ಸಂದೇಶವನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪಿಸಲು ವಚನ ಶ್ರಾವಣ ಆಯೋಜಿಸಲಾಗಿದೆ’ ಎಂದು ಹೇಳಿದರು.</p>.<p>ಪಂ. ದೇವೇಂದ್ರಕುಮಾರ ಪತ್ತಾರ್, ಸರಸ್ವತಿ ಹೆಗಡೆ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಈರಯ್ಯ ಚಿಕ್ಕಮಠ್, ಸವಿತಾ ಅಮರೇಶ್, ಚೇತನಾ ಮುಧೋಳ್, ಸಿದ್ದರಾಮ ಕೇಸಾಪುರ, ಚಂದ್ರಮತಿ ಗಿರೀಶ್, ಪೂರ್ಣಿಕ ಆರಾಧ್ಯ ವಚನಗಳನ್ನು ಮನದುಂಬಿ ಹಾಡುವುದರ ಮೂಲಕ ವಚನ ಶ್ರಾವಣಕ್ಕೆ ಮೆರಗು ನೀಡಿದರು.</p>.<p>ಬಳಗದ ಪ್ರಭು, ರಾಜಾ ಗುರುಪ್ರಸಾದ್, ಗಂಗಾಂಬಿಕೆ ಮುನಿರಾಜಪ್ಪ, ಡಾ. ಶಿವದೇವ್, ಎಲೆ ಶಶಿಧರ್, ವಚನ ಕಲಿಕಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ದೇವರಿದ್ದಾನೋ ಇಲ್ಲವೋ ಎಂಬ ಚಿಂತೆಯೂ ಸೇರಿದಂತೆ ಹತ್ತಾರು ಚಿಂತೆಗಳೆಂಬ ಚಿತೆಯಲ್ಲಿ ವಚನಗಳು ಪರಿಹಾರವಾಗಿವೆ’ ಎಂದು ಸಂಸ್ಕೃತಿ ಚಿಂತಕ ಎಸ್. ಷಡಕ್ಷರಿ ಹೇಳಿದರು.</p>.<p>ವಿಜಯನಗರದ ಡಾ. ಮುನಿರಾಜಪ್ಪನವರ ‘ಹೊಂಬೆಳಕು‘ನಲ್ಲಿ ನಡೆದ ವಚನಜ್ಯೋತಿ ಬಳಗದ ವಚನ ಶ್ರಾವಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉಪನ್ಯಾಸಕಿಯಾಗಿ ಮಾತನಾಡಿದ 5ನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಹಣ್ಣಿ, ‘ವಚನವೆಂದರೆ ಬರಿ ಮಾತಲ್ಲ, ಅದು ಪ್ರಮಾಣ. ನಡೆಯೊಳಗೆ ನುಡಿಯ ಪೂರೈಸುವುದೇ ವಚನ’ ಎಂದು ವಿವರಿಸಿದರು.</p>.<p>ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ‘ಹೆಚ್ಚುತ್ತಿರುವ ಮೌಢ್ಯಾಚರಣೆಗಳ ಕುರಿತು ಅರಿವು ಮೂಡಿಸಿ ಸರಳ ಶುದ್ದ ಬದುಕನ್ನು ರೂಢಿಸಿಕೊಳ್ಳಬೇಕೆಂಬ ಬಸವಾದಿ ಪ್ರಮಥರ ಸಂದೇಶವನ್ನು ಜನಸಾಮಾನ್ಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪಿಸಲು ವಚನ ಶ್ರಾವಣ ಆಯೋಜಿಸಲಾಗಿದೆ’ ಎಂದು ಹೇಳಿದರು.</p>.<p>ಪಂ. ದೇವೇಂದ್ರಕುಮಾರ ಪತ್ತಾರ್, ಸರಸ್ವತಿ ಹೆಗಡೆ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಈರಯ್ಯ ಚಿಕ್ಕಮಠ್, ಸವಿತಾ ಅಮರೇಶ್, ಚೇತನಾ ಮುಧೋಳ್, ಸಿದ್ದರಾಮ ಕೇಸಾಪುರ, ಚಂದ್ರಮತಿ ಗಿರೀಶ್, ಪೂರ್ಣಿಕ ಆರಾಧ್ಯ ವಚನಗಳನ್ನು ಮನದುಂಬಿ ಹಾಡುವುದರ ಮೂಲಕ ವಚನ ಶ್ರಾವಣಕ್ಕೆ ಮೆರಗು ನೀಡಿದರು.</p>.<p>ಬಳಗದ ಪ್ರಭು, ರಾಜಾ ಗುರುಪ್ರಸಾದ್, ಗಂಗಾಂಬಿಕೆ ಮುನಿರಾಜಪ್ಪ, ಡಾ. ಶಿವದೇವ್, ಎಲೆ ಶಶಿಧರ್, ವಚನ ಕಲಿಕಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>