<p><strong>ಕೆ.ಆರ್.ಪುರ:</strong> ವೈಕುಂಠ ಏಕಾದಶಿ ಪ್ರಯುಕ್ತ ಕೆ.ಆರ್.ಪುರದ ಪುರಾತನ ಕೋಟೆ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರಗಿದವು.</p>.<p>ಶ್ರೀಕೋಟೆ ವೆಂಕಟರಮಣಸ್ವಾಮಿಗೆ ಹಾಲು, ತುಪ್ಪ, ಹಣ್ಣಿನ ವಿವಿಧ ದ್ರವಗಳಿಂದ ಅಭಿಷೇಕ ಕವಚಧಾರಣಿ, ಮಹಾಮಂಗಳಾರತಿ ನಡೆಯಿತು. ದೇಗುಲಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು.</p>.<p>ಕೆ.ಆರ್.ಪುರ, ಬಾಣಸವಾಡಿ, ಮಹದೇವಪುರ, ಬೈಯ್ಯಪ್ಪನಹಳ್ಳಿ, ಹೊಸಕೋಟೆ, ಹೆಣ್ಣೂರು, ಬೈರತಿ, ಕಸ್ತೂರಿನಗರ, ಸೇರಿ ವಿವಿಧೆಡೆಯ ಭಕ್ತರು ದೇವರ ದರ್ಶನ ಪಡೆದರು.</p>.<p>ದೇವಸ್ಥಾನದ ಆಡಳಿತ ಟ್ರಸ್ಟ್ ಮತ್ತು ಕೆ.ಆರ್.ಪುರ ಸಮಾನ ಮನಸ್ಕ ಗ್ರಾಮಸ್ಥರ ವತಿಯಿಂದ ಮೂವತ್ತು ಸಾವಿರ ಲಾಡು ಭಕ್ತರಿಗೆ ವಿತರಿಸಲಾಯಿತು.</p>.<h2>ಪೀಣ್ಯ ದಾಸರಹಳ್ಳಿ: </h2><p>ವೈಕುಂಠ ಏಕಾದಶಿಯ ಪ್ರಯುಕ್ತ ಚಿಕ್ಕಬಾಣಾವರದ ಹಳೆ ಗ್ರಾಮದ 600ವರ್ಷಗಳ ಇತಿಹಾಸವಿರುವ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು. </p>.<h2>ಯಲಹಂಕ: </h2><p>ಬ್ಯಾಟರಾಯನಪುರ ಕ್ಷೇತ್ರದ ತರಬನಹಳ್ಳಿಯಲ್ಲಿರುವ ತಿರುಮಲ ದೇವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯಲಹಂಕ ಉಪನಗರದ ಶ್ರೀನಿವಾಸ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ:</strong> ವೈಕುಂಠ ಏಕಾದಶಿ ಪ್ರಯುಕ್ತ ಕೆ.ಆರ್.ಪುರದ ಪುರಾತನ ಕೋಟೆ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರಗಿದವು.</p>.<p>ಶ್ರೀಕೋಟೆ ವೆಂಕಟರಮಣಸ್ವಾಮಿಗೆ ಹಾಲು, ತುಪ್ಪ, ಹಣ್ಣಿನ ವಿವಿಧ ದ್ರವಗಳಿಂದ ಅಭಿಷೇಕ ಕವಚಧಾರಣಿ, ಮಹಾಮಂಗಳಾರತಿ ನಡೆಯಿತು. ದೇಗುಲಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು.</p>.<p>ಕೆ.ಆರ್.ಪುರ, ಬಾಣಸವಾಡಿ, ಮಹದೇವಪುರ, ಬೈಯ್ಯಪ್ಪನಹಳ್ಳಿ, ಹೊಸಕೋಟೆ, ಹೆಣ್ಣೂರು, ಬೈರತಿ, ಕಸ್ತೂರಿನಗರ, ಸೇರಿ ವಿವಿಧೆಡೆಯ ಭಕ್ತರು ದೇವರ ದರ್ಶನ ಪಡೆದರು.</p>.<p>ದೇವಸ್ಥಾನದ ಆಡಳಿತ ಟ್ರಸ್ಟ್ ಮತ್ತು ಕೆ.ಆರ್.ಪುರ ಸಮಾನ ಮನಸ್ಕ ಗ್ರಾಮಸ್ಥರ ವತಿಯಿಂದ ಮೂವತ್ತು ಸಾವಿರ ಲಾಡು ಭಕ್ತರಿಗೆ ವಿತರಿಸಲಾಯಿತು.</p>.<h2>ಪೀಣ್ಯ ದಾಸರಹಳ್ಳಿ: </h2><p>ವೈಕುಂಠ ಏಕಾದಶಿಯ ಪ್ರಯುಕ್ತ ಚಿಕ್ಕಬಾಣಾವರದ ಹಳೆ ಗ್ರಾಮದ 600ವರ್ಷಗಳ ಇತಿಹಾಸವಿರುವ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು. </p>.<h2>ಯಲಹಂಕ: </h2><p>ಬ್ಯಾಟರಾಯನಪುರ ಕ್ಷೇತ್ರದ ತರಬನಹಳ್ಳಿಯಲ್ಲಿರುವ ತಿರುಮಲ ದೇವರ ಸನ್ನಿಧಿಯಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯಲಹಂಕ ಉಪನಗರದ ಶ್ರೀನಿವಾಸ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>