<p><strong>ಬೆಂಗಳೂರು:</strong> ‘ವೆಂಕಟಪ್ಪ ಚಿತ್ರಶಾಲೆಯಲ್ಲಿರುವ ಕೆ. ವೆಂಕಟಪ್ಪ ಹಾಗೂ ಕೆ.ಕೆ. ಹೆಬ್ಬಾರ್ ಅವರ ಕಲಾಕೃತಿಗಳನ್ನು ಸಂರಕ್ಷಿಸುವ ಕೆಲಸ ತ್ವರಿತವಾಗಿ ನಡೆಯಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅವರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಆಗ್ರಹಿಸಿದ್ದಾರೆ. </p><p>‘ವೆಂಕಟಪ್ಪ ಮತ್ತು ಹೆಬ್ಬಾರ್ ಅವರ ಕಲಾಕೃತಿಗಳು ರಾಷ್ಟ್ರದ ಹಾಗೂ ನಾಡಿನ ಕಲಾ ವಲಯದ ಆಸ್ತಿಯಾಗಿದೆ. ಅವರ ಅಪರೂಪದ ಕಲಾಕೃತಿಗಳು ಶಿಲೀಂಧ್ರದಿಂದ ಹಾಳಾಗುತ್ತಿರುವುದು ನೋವನ್ನುಂಟು ಮಾಡಿದೆ. ಗ್ಯಾಲರಿಯಲ್ಲಿರುವ ಕಲಾಕೃತಿಗಳ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ವಹಿಸಬೇಕು’ ಎಂದು ಹೇಳಿದ್ದಾರೆ.</p><p>‘ಕಲಾಕೃತಿಗಳನ್ನು ಸಂಬಂಧಪಟ್ಟವರು ಪ್ರತಿನಿತ್ಯ ಗಮನಿಸುತ್ತಿಲ್ಲವೆ ಎಂಬ ಪ್ರಶ್ನೆ ಎದುರಾಗಿದೆ. ಶಿಲೀಂಧ್ರಕ್ಕೆ ಒಳಗಾಗಿರುವ ಕಲಾಕೃತಿಗಳಲ್ಲದೆ, ಇತರ ಕಲಾಕೃತಿಗಳನ್ನೂ ಸುರಕ್ಷಿತವಾಗಿ ರಕ್ಷಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.</p>.ಬೆಂಗಳೂರು: ಅಂದ ಕಳೆದುಕೊಳ್ಳುತ್ತಿವೆ ವೆಂಕಟಪ್ಪ, ಹೆಬ್ಬಾರ್ ಕಲಾಕೃತಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ವೆಂಕಟಪ್ಪ ಚಿತ್ರಶಾಲೆಯಲ್ಲಿರುವ ಕೆ. ವೆಂಕಟಪ್ಪ ಹಾಗೂ ಕೆ.ಕೆ. ಹೆಬ್ಬಾರ್ ಅವರ ಕಲಾಕೃತಿಗಳನ್ನು ಸಂರಕ್ಷಿಸುವ ಕೆಲಸ ತ್ವರಿತವಾಗಿ ನಡೆಯಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅವರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಆಗ್ರಹಿಸಿದ್ದಾರೆ. </p><p>‘ವೆಂಕಟಪ್ಪ ಮತ್ತು ಹೆಬ್ಬಾರ್ ಅವರ ಕಲಾಕೃತಿಗಳು ರಾಷ್ಟ್ರದ ಹಾಗೂ ನಾಡಿನ ಕಲಾ ವಲಯದ ಆಸ್ತಿಯಾಗಿದೆ. ಅವರ ಅಪರೂಪದ ಕಲಾಕೃತಿಗಳು ಶಿಲೀಂಧ್ರದಿಂದ ಹಾಳಾಗುತ್ತಿರುವುದು ನೋವನ್ನುಂಟು ಮಾಡಿದೆ. ಗ್ಯಾಲರಿಯಲ್ಲಿರುವ ಕಲಾಕೃತಿಗಳ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ವಹಿಸಬೇಕು’ ಎಂದು ಹೇಳಿದ್ದಾರೆ.</p><p>‘ಕಲಾಕೃತಿಗಳನ್ನು ಸಂಬಂಧಪಟ್ಟವರು ಪ್ರತಿನಿತ್ಯ ಗಮನಿಸುತ್ತಿಲ್ಲವೆ ಎಂಬ ಪ್ರಶ್ನೆ ಎದುರಾಗಿದೆ. ಶಿಲೀಂಧ್ರಕ್ಕೆ ಒಳಗಾಗಿರುವ ಕಲಾಕೃತಿಗಳಲ್ಲದೆ, ಇತರ ಕಲಾಕೃತಿಗಳನ್ನೂ ಸುರಕ್ಷಿತವಾಗಿ ರಕ್ಷಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.</p>.ಬೆಂಗಳೂರು: ಅಂದ ಕಳೆದುಕೊಳ್ಳುತ್ತಿವೆ ವೆಂಕಟಪ್ಪ, ಹೆಬ್ಬಾರ್ ಕಲಾಕೃತಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>