ಬೆಂಗಳೂರು:ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಗೋಡೆ ಸಮೇತ ಶೆಡ್ ಕುಸಿದಿದ್ದು, ಬಿಹಾರದ ಕಾರ್ಮಿಕ ಪೂರನ್ ಪೂಜಾರಿ (19) ಎಂಬುವರು ಮೃತಪಟ್ಟಿದ್ದಾರೆ.
ಇಸ್ಕಾನ್ ದೇವಸ್ಥಾನ ಸಮೀಪದಲ್ಲಿ ಸಿಕಾನ್ ಕಂಪನಿ ವತಿಯಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು.
ಶೆಡ್ಗೆ ಹೊಂದಿಕೊಂಡು ದೊಡ್ಡ ಗೋಡೆ ಇತ್ತು. ಬೆಳಿಗ್ಗೆ 5.30ರ ಸುಮಾರಿಗೆ ಏಕಾಏಕಿ ಗೋಡೆ ಕುಸಿದು ಶೆಡ್ ಮೇಲೆ ಬಿದ್ದಿತ್ತು. ಶೆಡ್ ಸಹ ಕುಸಿದು ಬಿತ್ತು. ಘಟನೆಯಲ್ಲಿ ಭವಾನಿ ಸಿಂಗ್ (21) ಹಾಗೂ ಮಿಥುನ್ (22) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.