<p><strong>ಬೆಂಗಳೂರು</strong>: ಬಿಬಿಎಂಪಿಯು 198 ವಾರ್ಡ್ ಸಮಿತಿಗಳಿಗೆ ಮಂಜೂರು ಮಾಡಿರುವ ತಲಾ ₹60 ಲಕ್ಷ ಅನುದಾನ ಏನಾಯಿತು, ವಾರ್ಡ್ ಸಮಿತಿಗಳು ಇವುಗಳನ್ನು ಸಮರ್ಥವಾಗಿ ಬಳಸಿಕೊಂಡಿವೆಯೇ, ಅವುಗಳನ್ನು ಬಳಸಿಕೊಳ್ಳಲು ಇರುವ ಅಡ್ಡಿ ಆತಂಕಗಳೇನು?</p>.<p>ಜನಾಗ್ರಹ ಸಂಸ್ಥೆಯು ‘ನನ್ನ ನಗರ, ನನ್ನ ಬಜೆಟ್‘ ಕುರಿತು ಶನಿವಾರ ಆಯೋಜಿಸಿದ್ದ ಈ ವೆಬಿನಾರ್ ಇಂತಹದ್ದೊಂದು ಚರ್ಚೆಗೆ ವೇದಿಕೆ ಕಲ್ಪಿಸಿತು. ಬಿಬಿಎಂಪಿ ಅಧಿಕಾರಿಗಳು, ನಗರ ಯೋಜನೆ ತಜ್ಞರು, ನಾಗರಿಕರು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಈ ಚರ್ಚೆಯಲ್ಲಿ ಪಾಲ್ಗೊಂಡರು.</p>.<p>ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ’ವಾರ್ಡ್ ಸಮಿತಿಗಳು ಗ್ರಾಮ ಸಭೆಗಳು ಇದ್ದ ಹಾಗೆ. ಪ್ರಸ್ತುತ, ಎಲ್ಲಾ ವಾರ್ಡ್ಗಳಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ವಾರ್ಡ್ಗೆ ₹60 ಲಕ್ಷ ಅನುದಾನ ನೀಡಲಾಗಿದೆ. ₹ 60 ಲಕ್ಷದಲ್ಲಿ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ₹20 ಲಕ್ಷ ಮೀಸಲಿಡಲಾಗಿದೆ‘ ಎಂದು ವಿವರಿಸಿದರು.</p>.<p>‘ಜನಾಗ್ರಹ ಸಂಸ್ಥೆಯು ಪಾದಚಾರಿ ಮಾರ್ಗದ ಸ್ಥಿತಿಗತಿಗಳ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಆಧಾರದಲ್ಲಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಪ್ರತಿ ವಾರ್ಡ್ಗೆ ತಲಾ ₹ 20 ಲಕ್ಷಗಳನ್ನು ವಾರ್ಡ್ ಸಮಿತಿ ಸದಸ್ಯರ ಸಲಹೆಯ ಮೇರೆಗೆ ಬಳಸಲಾಗುವುದು. ಬಿಬಿಎಂಪಿ ಸುಮಾರು 10 ಸಾವಿರ ಕೊಳವೆಬಾವಿಗಳನ್ನು ನಿರ್ವಹಿಸುತ್ತಿದೆ. ಇದಕ್ಕಾಗಿಯೇ ₹20 ಲಕ್ಷ ಮೀಸಲಿಡಲಾಗಿದೆ’ ಎಂದು ವಿವರಿಸಿದರು.</p>.<p>ಜನಾಗ್ರಹ ಸಂಸ್ಥೆಯ ನಾಗರಿಕ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿ ಸಭೆಗಳನ್ನು ನಡೆಸಬೇಕು. ಈ ಸಮಿತಿಗಳಿಗೆಂದೇ ಅನುದಾನವನ್ನು ನೀಡಿ ನಾಗರಿಕ ಸಹಭಾಗಿತ್ವವನ್ನು ಉತ್ತೇಜಿಸಬೇಕು. ಇದೊಂದು ಉತ್ತಮ ಆರಂಭ. ಇದು ಬೆಂಗಳೂರಿನಲ್ಲಿ ಮಾತ್ರವಲ್ಲ. ದೇಶದಾದ್ಯಂತ ನಡೆಯಬೇಕು’ ಎಂದು ಸಲಹೆ ನೀಡಿದರು.</p>.<p>ವಾರ್ಡ್ ಸಮಿತಿಗಳಿಗೆ ತಲಾ ₹60 ಲಕ್ಷ ಅನುದಾನವನ್ನು ಆಗಸ್ಟ್ 2021ರಲ್ಲಿ ಮಂಜೂರು ಮಾಡಲಾಗಿತ್ತು. ‘ನನ್ನ ನಗರ, ನನ್ನ ಬಜೆಟ್‘ ಕುರಿತಾದ ಸಮೀಕ್ಷೆಯಲ್ಲಿ ಸುಮಾರು ಒಂಬತ್ತು ಸಾವಿರ ನಾಗರಿಕರು ನೀಡಿದ ಸಲಹೆಗಳ ಆಧಾರದ ಮೇಲೆ ಅನುದಾನ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.</p>.<p>ಅಹಮದಾಬಾದ್, ಮುಂಬೈ, ಭುವನೇಶ್ವರ, ಹೈದರಾಬಾದ್ ಮತ್ತು ಚೆನ್ನೈ ನಾಗರಿಕರು ಕೂಡ ವೆಬಿನಾರ್ನಲ್ಲಿ ಪಾಲ್ಗೊಂಡು, ಬೆಂಗಳೂರಿನಲ್ಲಿ ವಾರ್ಡ್ ಸಮಿತಿಗಳನ್ನು ಬಲಪಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಬಿಎಂಪಿಯು 198 ವಾರ್ಡ್ ಸಮಿತಿಗಳಿಗೆ ಮಂಜೂರು ಮಾಡಿರುವ ತಲಾ ₹60 ಲಕ್ಷ ಅನುದಾನ ಏನಾಯಿತು, ವಾರ್ಡ್ ಸಮಿತಿಗಳು ಇವುಗಳನ್ನು ಸಮರ್ಥವಾಗಿ ಬಳಸಿಕೊಂಡಿವೆಯೇ, ಅವುಗಳನ್ನು ಬಳಸಿಕೊಳ್ಳಲು ಇರುವ ಅಡ್ಡಿ ಆತಂಕಗಳೇನು?</p>.<p>ಜನಾಗ್ರಹ ಸಂಸ್ಥೆಯು ‘ನನ್ನ ನಗರ, ನನ್ನ ಬಜೆಟ್‘ ಕುರಿತು ಶನಿವಾರ ಆಯೋಜಿಸಿದ್ದ ಈ ವೆಬಿನಾರ್ ಇಂತಹದ್ದೊಂದು ಚರ್ಚೆಗೆ ವೇದಿಕೆ ಕಲ್ಪಿಸಿತು. ಬಿಬಿಎಂಪಿ ಅಧಿಕಾರಿಗಳು, ನಗರ ಯೋಜನೆ ತಜ್ಞರು, ನಾಗರಿಕರು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಈ ಚರ್ಚೆಯಲ್ಲಿ ಪಾಲ್ಗೊಂಡರು.</p>.<p>ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ’ವಾರ್ಡ್ ಸಮಿತಿಗಳು ಗ್ರಾಮ ಸಭೆಗಳು ಇದ್ದ ಹಾಗೆ. ಪ್ರಸ್ತುತ, ಎಲ್ಲಾ ವಾರ್ಡ್ಗಳಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ವಾರ್ಡ್ಗೆ ₹60 ಲಕ್ಷ ಅನುದಾನ ನೀಡಲಾಗಿದೆ. ₹ 60 ಲಕ್ಷದಲ್ಲಿ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ₹20 ಲಕ್ಷ ಮೀಸಲಿಡಲಾಗಿದೆ‘ ಎಂದು ವಿವರಿಸಿದರು.</p>.<p>‘ಜನಾಗ್ರಹ ಸಂಸ್ಥೆಯು ಪಾದಚಾರಿ ಮಾರ್ಗದ ಸ್ಥಿತಿಗತಿಗಳ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಆಧಾರದಲ್ಲಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಪ್ರತಿ ವಾರ್ಡ್ಗೆ ತಲಾ ₹ 20 ಲಕ್ಷಗಳನ್ನು ವಾರ್ಡ್ ಸಮಿತಿ ಸದಸ್ಯರ ಸಲಹೆಯ ಮೇರೆಗೆ ಬಳಸಲಾಗುವುದು. ಬಿಬಿಎಂಪಿ ಸುಮಾರು 10 ಸಾವಿರ ಕೊಳವೆಬಾವಿಗಳನ್ನು ನಿರ್ವಹಿಸುತ್ತಿದೆ. ಇದಕ್ಕಾಗಿಯೇ ₹20 ಲಕ್ಷ ಮೀಸಲಿಡಲಾಗಿದೆ’ ಎಂದು ವಿವರಿಸಿದರು.</p>.<p>ಜನಾಗ್ರಹ ಸಂಸ್ಥೆಯ ನಾಗರಿಕ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿ ಸಭೆಗಳನ್ನು ನಡೆಸಬೇಕು. ಈ ಸಮಿತಿಗಳಿಗೆಂದೇ ಅನುದಾನವನ್ನು ನೀಡಿ ನಾಗರಿಕ ಸಹಭಾಗಿತ್ವವನ್ನು ಉತ್ತೇಜಿಸಬೇಕು. ಇದೊಂದು ಉತ್ತಮ ಆರಂಭ. ಇದು ಬೆಂಗಳೂರಿನಲ್ಲಿ ಮಾತ್ರವಲ್ಲ. ದೇಶದಾದ್ಯಂತ ನಡೆಯಬೇಕು’ ಎಂದು ಸಲಹೆ ನೀಡಿದರು.</p>.<p>ವಾರ್ಡ್ ಸಮಿತಿಗಳಿಗೆ ತಲಾ ₹60 ಲಕ್ಷ ಅನುದಾನವನ್ನು ಆಗಸ್ಟ್ 2021ರಲ್ಲಿ ಮಂಜೂರು ಮಾಡಲಾಗಿತ್ತು. ‘ನನ್ನ ನಗರ, ನನ್ನ ಬಜೆಟ್‘ ಕುರಿತಾದ ಸಮೀಕ್ಷೆಯಲ್ಲಿ ಸುಮಾರು ಒಂಬತ್ತು ಸಾವಿರ ನಾಗರಿಕರು ನೀಡಿದ ಸಲಹೆಗಳ ಆಧಾರದ ಮೇಲೆ ಅನುದಾನ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.</p>.<p>ಅಹಮದಾಬಾದ್, ಮುಂಬೈ, ಭುವನೇಶ್ವರ, ಹೈದರಾಬಾದ್ ಮತ್ತು ಚೆನ್ನೈ ನಾಗರಿಕರು ಕೂಡ ವೆಬಿನಾರ್ನಲ್ಲಿ ಪಾಲ್ಗೊಂಡು, ಬೆಂಗಳೂರಿನಲ್ಲಿ ವಾರ್ಡ್ ಸಮಿತಿಗಳನ್ನು ಬಲಪಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>