<p><strong>ಬೆಂಗಳೂರು:</strong> ರಸ್ತೆ, ತೆರೆದ ಪ್ರದೇಶದಲ್ಲಿ ಕಸ ವರ್ಗಾವಣೆ, ದ್ರವ ತ್ಯಾಜ್ಯದ ಸಮಸ್ಯೆ, ಬೀದಿ ಪ್ರಾಣಿಗಳಿಂದ ಎರೆಚಾಟ,<br />ಕಾಂಪ್ಯಾಕ್ಟರ್ಗಳ ಓಡಾಟ ಕಡಿಮೆಗೊಳಿಸುವ ‘ಮಿನಿ ಟ್ರಾನ್ಸ್ಫರ್ ಸ್ಟೇಷನ್’ (ಎಂಟಿಎಸ್) ಸ್ಥಾಪನೆಗೆ ನಾಗರಿಕರ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ಮೂರು ವರ್ಷವಾದರೂ 9 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.</p>.<p>ಎಂಟಿಎಸ್ ಅನ್ನು 30x40 ಅಡಿ ಅಳತೆಯ ಸುಮಾರು ಒಂದು ಸಾವಿರ ಚದರ ಅಡಿ ಸ್ಥಳದಲ್ಲಿ ಸ್ಥಾಪಿಸಬಹುದು. ಟ್ರಕ್ಟ್<br />ಕೊಂಡೊಯ್ಯಬಹುದಾದ →ಪೋರ್ಟಬಲ್ ಕಾಂಪ್ಯಾಕ್ಟರ್, ಹುಕ್ ಲೋಡರ್ ಇರುತ್ತವೆ. ತಲಾಒಬ್ಬ ಆಪರೇಟರ್, ಚಾಲಕ, ಸಹಾಯಕ, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಐವರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.</p>.<p>‘ವಾರ್ಡ್ಗಳಲ್ಲಿ ಆಟೊ, ಟಿಪ್ಪರ್ ಹಾಗೂ ಕೈಗಾಡಿಗಳಿಂದ ಹಸಿ ಕಸ ನೇರವಾಗಿ ಕಾಂಪ್ಯಾಕ್ಟರ್ಗಳಿಗೆ ರಸ್ತೆ ಅಥವಾ ಕೆಲವು ತೆರೆದ ಪ್ರದೇಶಗಳಲ್ಲಿ ವರ್ಗಾವಣೆ ಆಗುತ್ತಿದೆ. ಈ ಜಾಗದಲ್ಲಿ ದ್ರವ ತ್ಯಾಜ್ಯ, ತ್ಯಾಜ್ಯ ಚೆಲ್ಲಿರುವ ಪ್ರಕರಣಗಳದ್ದೇ ಸಮಸ್ಯೆ. ಇದನ್ನು ಎಂಟಿಎಸ್ ನಿವಾರಿಸಲಿದೆ. ಆಟೊ, ಟಿಪ್ಪರ್ಗಳಿಂದ ಬರುವ ಕಸ ಎಂಟಿಎಸ್ ಕೇಂದ್ರದಲ್ಲಿರುವ ಪೋರ್ಟಬಲ್ ಕಾಂಪ್ಯಾಕ್ಟರ್ಗೆ ವರ್ಗಾವಣೆಯಾಗುತ್ತದೆ. ಅಲ್ಲಿ, ತ್ಯಾಜ್ಯವನ್ನು ಕಾಂಪ್ಯಾಕ್ಟ್ ಮಾಡುವ ಜೊತೆಗೆ ದ್ರವ ತ್ಯಾಜ್ಯವನ್ನು ಹೊರಹಾಕ<br />ಲಾಗುತ್ತದೆ. ಅಲ್ಲಿಂದ ಸಂಸ್ಕರಣೆಗೆ ಘಟಕಕ್ಕೆ ಟ್ರಕ್ಗಳಲ್ಲಿ ತೆರಳುತ್ತದೆ’ ಎಂದುಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾ<br />ಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ವಿವರ ನೀಡಿದರು.</p>.<p>‘ದಿನದ ಎಲ್ಲ ಸಮಯವೂ ಕಾರ್ಯನಿರ್ವಹಿಸುವ ಎಂಟಿಎಸ್ಗಳನ್ನು ಒಂದೇ ರೀತಿಯಲ್ಲಿ ಸ್ಥಾಪಿಸಲಾಗುತ್ತದೆ.ಇದರ ನೀಲನಕ್ಷೆ ಇದೆ. ಯಾವುದೇ ರೀತಿಯ ಸಮಸ್ಯೆ ಸುತ್ತಮುತ್ತಲಿನವರಿಗೆ ಉಂಟಾಗುವುದಿಲ್ಲ’ ಎಂದು ಎಂಜಿನಿಯರ್ ಮಹದೇವ್ ತಿಳಿಸಿದರು.</p>.<p>ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನದಲ್ಲಿ ಪ್ರಥಮ ಬಾರಿಗೆ ₹136.06 ಕೋಟಿಯಲ್ಲಿ 50 ಎಂಟಿಎಸ್<br />ಗಳು ಸ್ಥಾಪನೆಯಾಗಲಿವೆ. ಏಳು ವರ್ಷ ಇವುಗಳ ನಿರ್ವಹಣೆಗೆ ಒಟ್ಟಾರೆ ₹256.73 ಕೋಟಿ ವೆಚ್ಚವಾಗಲಿದೆ.</p>.<p>ಬಿಬಿಎಂಪಿ ಹೊರಭಾಗದಲ್ಲಿ 9 ಎಂಟಿಎಸ್ ಪ್ರಾರಂಭವಾಗಿವೆ. ಕೆಲವು ಮೇಲ್ಸೇತುವೆ ಕೆಳಗೆ ಸ್ಥಾಪಿಸಲಾಗುತ್ತಿದೆ.<br />ಆದರೂ 50 ಎಂಟಿಎಸ್ ಸ್ಥಾಪನೆಯಾಗುವ ಸ್ಥಳದಲ್ಲಿ ಇದೀಗ 44ಕ್ಕೆ ಮಾತ್ರ ಚಾಲನೆ ಸಿಕ್ಕಿದೆ. ಇದರಲ್ಲಿ 16 ಪ್ರದೇಶ<br />ಗಳಲ್ಲಿ ಸ್ಥಳೀಯರು ವಿರೋಧಿಸಿದ್ದಾರೆ. ಹೀಗಾಗಿ, ಯೋಜನೆ ಕುಂಟುತ್ತಿದೆ.</p>.<p>ಎಲ್ಲರೂ ಕಸ ನಮ್ಮಲ್ಲಿ ವರ್ಗಾವಣೆ, ವಿಂಗಡಣೆ ಬೇಡ ಎಂದರೆ ಆ ಕಾರ್ಯವನ್ನು ಎಲ್ಲಿ ಮಾಡು<br />ವುದು? ಆಯಾ ವಾರ್ಡ್ನ ತ್ಯಾಜ್ಯ ಅಲ್ಲಿಯೇ ಸಂಸ್ಕರಣೆಯಾಬೇಕೆಂಬ ಯೋಜನೆಯೂ ಇದೆ. ಆದರೆ, ಹಲವೆಡೆ ಎಂಟಿಎಸ್ಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೋಜನೆ ವಿಳಂಬವಾಗುತ್ತಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಹೇಳಿದರು.</p>.<p>***</p>.<p>‘ಎಲ್ಲರೂ ಕಸ ನಮ್ಮಲ್ಲಿ ವರ್ಗಾವಣೆ, ವಿಂಗಡಣೆ ಬೇಡ ಎಂದರೆ ಆ ಕಾರ್ಯವನ್ನು ಎಲ್ಲಿ ಮಾಡುವುದು? ಆಯಾ ವಾರ್ಡ್ನ ತ್ಯಾಜ್ಯ ಅಲ್ಲಿಯೇ ಸಂಸ್ಕರಣೆಯಾಬೇಕೆಂಬ ಯೋಜನೆಯೂ ಇದೆ. ಆದರೆ, ಹಲವೆಡೆ ಎಂಟಿಎಸ್ಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೋಜನೆ ವಿಳಂಬವಾಗುತ್ತಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಹೇಳಿದರು.</p>.<p>‘ಎಲ್ಲೆಲ್ಲಿ ಸ್ಥಳಾವಕಾಶವಿದೆಯೋ ಅಲ್ಲೆಲ್ಲ ಎಂಟಿಎಸ್ ಆರಂಭಿಸುತ್ತಿದ್ದೇವೆ. ಎಂಟಿಎಸ್ ಸ್ಥಾಪನೆಯಿಂದ ಕಾಂಪ್ಯಾಕ್ಟರ್ಗಳ ಸಂಚಾರ<br />ಕಡಿಮೆಯಾಗುತ್ತದೆ. ಅವಕಾಶ ನೀಡಬೇಕು’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಪರಶುರಾಮ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಸ್ತೆ, ತೆರೆದ ಪ್ರದೇಶದಲ್ಲಿ ಕಸ ವರ್ಗಾವಣೆ, ದ್ರವ ತ್ಯಾಜ್ಯದ ಸಮಸ್ಯೆ, ಬೀದಿ ಪ್ರಾಣಿಗಳಿಂದ ಎರೆಚಾಟ,<br />ಕಾಂಪ್ಯಾಕ್ಟರ್ಗಳ ಓಡಾಟ ಕಡಿಮೆಗೊಳಿಸುವ ‘ಮಿನಿ ಟ್ರಾನ್ಸ್ಫರ್ ಸ್ಟೇಷನ್’ (ಎಂಟಿಎಸ್) ಸ್ಥಾಪನೆಗೆ ನಾಗರಿಕರ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ಮೂರು ವರ್ಷವಾದರೂ 9 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.</p>.<p>ಎಂಟಿಎಸ್ ಅನ್ನು 30x40 ಅಡಿ ಅಳತೆಯ ಸುಮಾರು ಒಂದು ಸಾವಿರ ಚದರ ಅಡಿ ಸ್ಥಳದಲ್ಲಿ ಸ್ಥಾಪಿಸಬಹುದು. ಟ್ರಕ್ಟ್<br />ಕೊಂಡೊಯ್ಯಬಹುದಾದ →ಪೋರ್ಟಬಲ್ ಕಾಂಪ್ಯಾಕ್ಟರ್, ಹುಕ್ ಲೋಡರ್ ಇರುತ್ತವೆ. ತಲಾಒಬ್ಬ ಆಪರೇಟರ್, ಚಾಲಕ, ಸಹಾಯಕ, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಐವರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.</p>.<p>‘ವಾರ್ಡ್ಗಳಲ್ಲಿ ಆಟೊ, ಟಿಪ್ಪರ್ ಹಾಗೂ ಕೈಗಾಡಿಗಳಿಂದ ಹಸಿ ಕಸ ನೇರವಾಗಿ ಕಾಂಪ್ಯಾಕ್ಟರ್ಗಳಿಗೆ ರಸ್ತೆ ಅಥವಾ ಕೆಲವು ತೆರೆದ ಪ್ರದೇಶಗಳಲ್ಲಿ ವರ್ಗಾವಣೆ ಆಗುತ್ತಿದೆ. ಈ ಜಾಗದಲ್ಲಿ ದ್ರವ ತ್ಯಾಜ್ಯ, ತ್ಯಾಜ್ಯ ಚೆಲ್ಲಿರುವ ಪ್ರಕರಣಗಳದ್ದೇ ಸಮಸ್ಯೆ. ಇದನ್ನು ಎಂಟಿಎಸ್ ನಿವಾರಿಸಲಿದೆ. ಆಟೊ, ಟಿಪ್ಪರ್ಗಳಿಂದ ಬರುವ ಕಸ ಎಂಟಿಎಸ್ ಕೇಂದ್ರದಲ್ಲಿರುವ ಪೋರ್ಟಬಲ್ ಕಾಂಪ್ಯಾಕ್ಟರ್ಗೆ ವರ್ಗಾವಣೆಯಾಗುತ್ತದೆ. ಅಲ್ಲಿ, ತ್ಯಾಜ್ಯವನ್ನು ಕಾಂಪ್ಯಾಕ್ಟ್ ಮಾಡುವ ಜೊತೆಗೆ ದ್ರವ ತ್ಯಾಜ್ಯವನ್ನು ಹೊರಹಾಕ<br />ಲಾಗುತ್ತದೆ. ಅಲ್ಲಿಂದ ಸಂಸ್ಕರಣೆಗೆ ಘಟಕಕ್ಕೆ ಟ್ರಕ್ಗಳಲ್ಲಿ ತೆರಳುತ್ತದೆ’ ಎಂದುಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾ<br />ಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ವಿವರ ನೀಡಿದರು.</p>.<p>‘ದಿನದ ಎಲ್ಲ ಸಮಯವೂ ಕಾರ್ಯನಿರ್ವಹಿಸುವ ಎಂಟಿಎಸ್ಗಳನ್ನು ಒಂದೇ ರೀತಿಯಲ್ಲಿ ಸ್ಥಾಪಿಸಲಾಗುತ್ತದೆ.ಇದರ ನೀಲನಕ್ಷೆ ಇದೆ. ಯಾವುದೇ ರೀತಿಯ ಸಮಸ್ಯೆ ಸುತ್ತಮುತ್ತಲಿನವರಿಗೆ ಉಂಟಾಗುವುದಿಲ್ಲ’ ಎಂದು ಎಂಜಿನಿಯರ್ ಮಹದೇವ್ ತಿಳಿಸಿದರು.</p>.<p>ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನದಲ್ಲಿ ಪ್ರಥಮ ಬಾರಿಗೆ ₹136.06 ಕೋಟಿಯಲ್ಲಿ 50 ಎಂಟಿಎಸ್<br />ಗಳು ಸ್ಥಾಪನೆಯಾಗಲಿವೆ. ಏಳು ವರ್ಷ ಇವುಗಳ ನಿರ್ವಹಣೆಗೆ ಒಟ್ಟಾರೆ ₹256.73 ಕೋಟಿ ವೆಚ್ಚವಾಗಲಿದೆ.</p>.<p>ಬಿಬಿಎಂಪಿ ಹೊರಭಾಗದಲ್ಲಿ 9 ಎಂಟಿಎಸ್ ಪ್ರಾರಂಭವಾಗಿವೆ. ಕೆಲವು ಮೇಲ್ಸೇತುವೆ ಕೆಳಗೆ ಸ್ಥಾಪಿಸಲಾಗುತ್ತಿದೆ.<br />ಆದರೂ 50 ಎಂಟಿಎಸ್ ಸ್ಥಾಪನೆಯಾಗುವ ಸ್ಥಳದಲ್ಲಿ ಇದೀಗ 44ಕ್ಕೆ ಮಾತ್ರ ಚಾಲನೆ ಸಿಕ್ಕಿದೆ. ಇದರಲ್ಲಿ 16 ಪ್ರದೇಶ<br />ಗಳಲ್ಲಿ ಸ್ಥಳೀಯರು ವಿರೋಧಿಸಿದ್ದಾರೆ. ಹೀಗಾಗಿ, ಯೋಜನೆ ಕುಂಟುತ್ತಿದೆ.</p>.<p>ಎಲ್ಲರೂ ಕಸ ನಮ್ಮಲ್ಲಿ ವರ್ಗಾವಣೆ, ವಿಂಗಡಣೆ ಬೇಡ ಎಂದರೆ ಆ ಕಾರ್ಯವನ್ನು ಎಲ್ಲಿ ಮಾಡು<br />ವುದು? ಆಯಾ ವಾರ್ಡ್ನ ತ್ಯಾಜ್ಯ ಅಲ್ಲಿಯೇ ಸಂಸ್ಕರಣೆಯಾಬೇಕೆಂಬ ಯೋಜನೆಯೂ ಇದೆ. ಆದರೆ, ಹಲವೆಡೆ ಎಂಟಿಎಸ್ಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೋಜನೆ ವಿಳಂಬವಾಗುತ್ತಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಹೇಳಿದರು.</p>.<p>***</p>.<p>‘ಎಲ್ಲರೂ ಕಸ ನಮ್ಮಲ್ಲಿ ವರ್ಗಾವಣೆ, ವಿಂಗಡಣೆ ಬೇಡ ಎಂದರೆ ಆ ಕಾರ್ಯವನ್ನು ಎಲ್ಲಿ ಮಾಡುವುದು? ಆಯಾ ವಾರ್ಡ್ನ ತ್ಯಾಜ್ಯ ಅಲ್ಲಿಯೇ ಸಂಸ್ಕರಣೆಯಾಬೇಕೆಂಬ ಯೋಜನೆಯೂ ಇದೆ. ಆದರೆ, ಹಲವೆಡೆ ಎಂಟಿಎಸ್ಗೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೋಜನೆ ವಿಳಂಬವಾಗುತ್ತಿದೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ಅವರು ಹೇಳಿದರು.</p>.<p>‘ಎಲ್ಲೆಲ್ಲಿ ಸ್ಥಳಾವಕಾಶವಿದೆಯೋ ಅಲ್ಲೆಲ್ಲ ಎಂಟಿಎಸ್ ಆರಂಭಿಸುತ್ತಿದ್ದೇವೆ. ಎಂಟಿಎಸ್ ಸ್ಥಾಪನೆಯಿಂದ ಕಾಂಪ್ಯಾಕ್ಟರ್ಗಳ ಸಂಚಾರ<br />ಕಡಿಮೆಯಾಗುತ್ತದೆ. ಅವಕಾಶ ನೀಡಬೇಕು’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಪರಶುರಾಮ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>