2014ರಲ್ಲಿ ಮಹಿಳೆ ಈ ಮಾದರಿಯ ಕ್ಯಾನ್ಸರ್ಗೆ ಒಳಗಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ 2015
ರಲ್ಲಿ ಅಸ್ಥಿ ಮಜ್ಜೆ ಕಸಿ ಮಾಡಿಸಿಕೊಂಡಿದ್ದರು. ಮೂರು ವರ್ಷಗಳ ಬಳಿಕ ಇದೇ ಕ್ಯಾನ್ಸರ್ ಅವರಲ್ಲಿ ಮರುಕಳಿಸಿತು. ಕಳೆದ ವರ್ಷ ಪುನಃ ರಕ್ತ ಕ್ಯಾನ್ಸರ್ ಜತೆಗೆ ಮೂತ್ರಪಿಂಡದ ಸಮಸ್ಯೆಯೂ ಕಾಣಿಸಿಕೊಂಡ ಪರಿಣಾಮ ಅವರಿಗೆ ಆಸ್ಟರ್ಐವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ‘ಬೆನ್ನು ನೋವು, ರಕ್ತ ಹೀನತೆಸಮಸ್ಯೆಗಳ ಬಗ್ಗೆ ಜನತೆ ಹೆಚ್ಚುತಲೆಕೆಡಿಸಿಕೊಳ್ಳುವುದಿಲ್ಲ. ಈ ಪ್ರಕರಣದಲ್ಲೂ ಹಾಗೇ ಆಗಿದೆ. ಮೋನೊಕ್ಲೋನಲ್ ಪ್ರತಿಕಾಯ ಥೆರಪಿಯಿಂದ ಕಾಯಿಲೆ ಗುಣಪಡಿಸಿದೆವು. ಎಂದು ವೈದ್ಯ ಡಾ.ಎನ್.ಆದಿತ್ಯ ಮುರಳಿ ಹೇಳಿದರು.