ಮೂಲ್ಕಿ: ‘ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಇದರಿಂದ ನಮ್ಮ ಸಂಸ್ಕೃತಿ ಬೆಳೆಸಿದಂತೆ’ ಎಂದು ಕಟೀಲು ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕಟೀಲು ದೇವಸ್ಥಾನದ ರಥಬೀದಿಯಲ್ಲಿ ಶನಿವಾರ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಂದರ್ಭದಲ್ಲಿ ನಡೆದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಯಕ್ಷಗಾನವೆಂಬುದು ಶ್ರೇಷ್ಠ ಕಲಾ ಸಂಸ್ಕೃತಿಯಾಗಿದೆ, ಅರ್ಧ ದಶಕಕ್ಕಿಂತಲೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಇದ್ದಾರೆ. ಅಂತಹ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ’ ಎಂದರು.
ಮೇಳದ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಅರ್ಚಕ ಹರಿನಾರಾಯಣ ಆಸ್ರಣ್ಣ ಅಭಿನಂದನಾ ಮಾತುಗಳನ್ನಾಡಿದರು.
ಮುಂಬಯಿ ಉದ್ಯಮಿ ಕೃಷ್ಣ ಶೆಟ್ಟಿ, ಸದಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ದಾಮೋದರ್ ಶೆಟ್ಟಿ ಕಲ್ಯಾಣ್, ಜಯಂತ ಸೇನವ, ಗುರುಪ್ರಸಾದ್ ಶೆಟ್ಟಿ, ಮಾಧವ ಕೈಯ, ದಾಮಣ್ಣ ಶೆಟ್ಟಿ ದೇವಸ್ಯ, ಭಾಸ್ಕರ ದಾಸ ಎಕ್ಕಾರು, ಪ್ರದೀಪ್ ಶೆಟ್ಟಿ ಮುಂಬಯಿ, ದಿವಾಕರ ಶೆಟ್ಟಿ ಕೆ. ಜಿ. ಬೆಟ್ಟು, ಶೇಖರ ಶೆಟ್ಟಿ ಬೆಂಗಳೂರು, ದಯಾನಂದ ಶೆಟ್ಟಿ ಕೆ. ಜಿ. ಬೆಟ್ಟು , ಸುಧಾಕರ ಶೆಟ್ಟಿ ಮುಂಬಯಿ, ನಾಗರಾಜ ಶೆಟ್ಟಿ ಮುಂಬಯಿ, ಕಿರಣ್ ರೈ, ದೇವಿಪ್ರಸಾದ್ ಶೆಟ್ಟಿ, ನಿತ್ಯಾನಂದ ರೈ, ಸುರೇಶ್ ಶೆಟ್ಟಿ ಮರವೂರು ಬೀಡು, ಸತೀಶ್ ಶೆಟ್ಟಿ ಮರವೂರು ಬೀಡು, ವಿಜಯ್ ಶೆಟ್ಟಿ ಮುಂಬಯಿ, ಸಚಿನ್ ಶೆಟ್ಟಿ ಮುಂಬಯಿ, ಮನೋಹರ ಶೆಟ್ಟಿ ಕೊರೆದು, ಮಹಾಬಲ ಶೆಟ್ಟಿ ಕೊರೆದು, ರವಿ ಶೆಟ್ಟಿ ದೇವಸ್ಯ ಮುಂಬಯಿ , ಉಮೇಶ್ ಶೆಟ್ಟಿ ದೇವಸ್ಯ, ಜಯರಾಮ ಶೆಟ್ಟಿ , ಪ್ರದೀಪ್ ಆಳ್ವ ಬಂಬ್ರಾಣ, ದೂಮಣ್ಣ ಶೆಟ್ಟಿ ಕಲ್ಯಾಣ್, ರವೀಂದ್ರ ಮೆಂಡ ಮಣೇಲ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಟೀಲು ದೇವಸ್ಥಾನದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ , ಉದ್ಯಮಿ ಗಂಗಾಧರ ಆಳ್ವ, ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿ , ಮುಂಬಯಿ ಉದ್ಯಮಿಗಳಾದ ಕಲಾಧರ ಶೆಟ್ಟಿ , ಜೋತಿಷ್ಯಿ ಉಮೇಶ್ ಗುರೂಜಿ, ಧನಂಜಯ ಶೆಟ್ಟಿ , ಗಂಗಾಧರ ಆಳ್ವ , ಸಂಘಟಕ ಉದ್ಯಮಿ ಭಾಸ್ಕರ ಆಳ್ವ ಮುಂಬಯಿ, ಅಮಿತಾ ಭಾಸ್ಕರ ಆಳ್ವ, ರಚನ್ ಆಳ್ವ, ವಾಸುದೇವ ಶೆಣೈ ಉಪಸ್ಥಿತರಿದ್ದರು.
‘ಕಲಾವಿದರಿಗೆ ಸನ್ಮಾನ’
ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಮೇಳದ ಹಿರಿಯ ಕಲಾವಿದರಾದ ಬಾಬು ಕುಲಾಲ್, ಅಪ್ಪು ಕುಂಜ ಮಣಿಯಾಣಿ, ಶಶಿಧರ ಪಂಜ, ವಿಠಲಶೆಟ್ಟಿ ಸರಪಾಡಿ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.